ಹೊನ್ನಾವರ: ಅಯೊಧ್ಯೆ ಶ್ರೀ ರಾಮ ಮಂದಿರಕ್ಕೆ ನಿಧಿ ಸಮರ್ಪಣಾ ಕಾರ್ಯ ನಡೆಯುತ್ತಿದ್ದು, ಹಲವರು ದೇಣೆಗೆ ರೂಪದಲ್ಲಿ ಹಣ ನೀಡುತ್ತಿದ್ದಾರೆ. ಅದೆ ರೀತಿ ಪಟ್ಟಣದ ತಗ್ಗುಪಾಳ್ಯದಲ್ಲಿ ತಮ್ಮ ತಂದೆಯರ ಲಲಿತಾ ಹಾಗೂ ವೆಂಕಟೇಶ ಭಂಡಾರಿ ಇವರ ಸ್ಮರಣಾರ್ಥ ಮಕ್ಕಳು 111112 ಮೊತ್ತದ ಚೆಕ್ ನೀಡಿದ್ದಾರೆ. ಮಕ್ಕಳಾದ ಬಿಜೆಪಿ ತಾಲೂಕ ಅಧ್ಯಕ್ಷ ರಾಜೇಶ ಭಂಡಾರಿ, ಜರ್ಮನ್ ಕಂಪನಿಯ ವೈಸ್ ಪ್ರಸಿಡೆಂಟ್ ಗಣೇಶ ಭಂಡಾರಿ, ಪೋಲಿಸ್ ಇಲಾಖೆಯಲ್ಲಿ ಎ.ಸಿ.ಪಿ ಆಗಿ ಕಾರ್ಯನಿರ್ವಹಿಸುವ ಪಾಂಡುರಂಗ ಭಂಡಾರಿ ಇವರು ತಂದೆ ತಾಯಿಯ ಸ್ಮರಣಾರ್ಥವಾಗಿ ನೀಡಿದ್ದು ವಿಶ್ವಹಿಂದು ಪರಿಷತ್ ಪ್ರಮುಖರಾದ ವಿಶ್ವನಾಥ ನಾಯ್ಕ ಹಾಗೂ ಪಟ್ಟಣ ಪಂಚಾಯತ ಸದಸ್ಯ ವಿ.ಜು.ಕಾಮತ್ ಬಳಿ ಚೆಕ್ ಹಸ್ತಾಂತರಿಸಿದರು.
Leave a Comment