ಹಳಿಯಾಳ:- ಹಳಿಯಾಳದ ಶ್ರೀಛತ್ರಪತಿ ಶಿವಾಜಿ ತಾಲೂಕಾ ಕ್ರೀಡಾಂಗಣದಲ್ಲಿ ಗುರುವಾರ ಲಕ್ಷ್ಮಣ ಟ್ರೋಫಿ ಹಳಿಯಾಳ ಪ್ರಿಮಿಯರ್ ಲೀಗ್-2021 ಕ್ರೀಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಗಿದೆ.
ಇದೇ ಪ್ರಥಮ ಬಾರಿಗೆ ಹಳಿಯಾಳ ಪ್ರಿಮಿಯರ್ ಲಿಗ್ ಹೆಸರಿನಿಂದ ಹಳಿಯಾಳದಲ್ಲಿ ಕ್ರೀಕೆಟ್ ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿದೆ.
ಈ ಹಳಿಯಾಳ ಪ್ರಿಮಿಯರ್ ಲೀಗ್-2021 ಕ್ರೀಕೆಟ್ ಪಂದ್ಯಾವಳಿ ಅಚ್ಚುಕಟ್ಟಾಗಿ ನಡೆಯಲು ಕಮೀಟಿ ರಚಿಸಲಾಗಿದ್ದು ಅದರಲ್ಲಿ ಶ್ರೀನಿವಾಸ ಘೋಟ್ನೇಕರ, ರಮೇಶ ಶೆಟ್ಟಿ, ರಾಜು ಗೊಂಧಳಿ, ಮಹಾಂತೇಶ ತೊರಲೆಕರ, ರವಿ ಮಡಿವಾಳ, ಸತೀಶ ಗೌಡಾ, ಚೀರಂಜಿವಿ ನಾಯ್ಕ, ನಂದು ತೊರಸ್ಕರ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಗುರುವಾರ ಹಳಿಯಾಳದ ತಾಲೂಕಾ ಕ್ರೀಡಾಂಗಣದಲ್ಲಿ ಪ್ರಾರಂಭವಾದ ಈ ಕ್ರೀಕೆಟ್ ಪಂದ್ಯಾವಳಿಗೂ ಮುನ್ನ ಕ್ರೀಡಾಪಟುಗಳು ಹಾಗೂ ತಂಡದ ಮಾಲಿಕರು ಹಳಿಯಾಳದ ಪ್ರಸಿದ್ದ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಕ್ರೀಡಾಂಗಣದಲ್ಲಿ ಹಳಿಯಾಳದ ಹೆಸ್ಕಾಂ ಇಲಾಖೆ ಅಧಿಕಾರಿ ರವೀಂದ್ರ ಮೆಟಗುಡ್ಡ ಹಾಗೂ ಪಿಎಸ್ಐ ರಾಜಕುಮಾರ ಉಕ್ಕಲಿ ಅವರು ರಿಬ್ಬನ್ ಕಟ್ ಮಾಡಿ ಕ್ರೀಕೆಟ್ ಆಡುವ ಮೂಲಕ ಹಳಿಯಾಳ ಪ್ರಿಮಿಯರ್ ಲಿಗ್2021 ಪಂದ್ಯಾವಳಿಗೆ ಚಾಲನೆ ನೀಡಿದರು.
ಹಳಿಯಾಳ ಎಪಿಎಮ್ಸಿ ಅಧ್ಯಕ್ಷರು ಆಗಿರುವ ಎಸ್ಎಲ್ಜಿ ಕ್ರೀಕೆಟ್ ಟೀಮ್ ಮಾಲಿಕ ಶ್ರೀನಿವಾಸ ಘೊಟ್ನೇಕರ ಅವರು ಮಾತನಾಡಿ ನಾವು ಕಳೆದ ಅನೇಕ ವರ್ಷಗಳಿಂದ ಹಳಿಯಾಳದಲ್ಲಿ ಲಕ್ಷ್ಮಣ ಟ್ರೋಫಿ ಹೆಸರಿನಲ್ಲಿ ಕ್ರೀಕೆಟ್ ಪಂದ್ಯಾವಳಿಗಳನ್ನು ನಡೆಸುತ್ತಿದ್ದೇವೆ. ಆದರೇ ಈ ವರ್ಷ ಎಲ್ಲ ಕ್ರೀಕೆಟ್ ಪ್ರೇಮಿಗಳು ಎಲ್ಲರೂ ಒಗ್ಗಟ್ಟಾಗಿ ಹಳಿಯಾಳದಲ್ಲಿ ಏನಾದರೂ ಹೊಸತನ್ನು ಮಾಡುವ ಎಂದು ನಿರ್ಣಯಿಸಿದ್ದರ ಫಲವಾಗಿ ಇಂದು ಹಳಿಯಾಳ ಪ್ರೀಮಿಯರ್ ಲಿಗ್-2021 ನಡೆಯುತ್ತಿದೆ.
ತಮ್ಮ ಬಾಲ್ಯದ ದಿನಗಳಲ್ಲಿ ನಾವು ಸಾಕಷ್ಟು ಆಟಗಳನ್ನು ಆಡುತ್ತಿದ್ದೇವು. ಆದರೇ ಇಂದು ಮಕ್ಕಳು ಕೇವಲ ಮೊಬೈಲ್, ಟಿವಿ, ಕಂಪ್ಯೂಟರ್ ಎಂದು ದೈಹಿಕವಾಗಿ ಆರೋಗ್ಯವಂತರಾಗಿರಲು ಬೇಕಾದ ಆಟೋಟದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿಲ್ಲ. ಅಲ್ಲದೇ ಹಿಂದಿನ ಹಲವು ಕ್ರಿಡೆಗಳು ಇಂದು ನಶೀಸುವ ಹಂತಕ್ಕೆ ಬಂದು ತಲುಪಿವೆ. ಪಾಲಕರು ಸೇರಿದಂತೆ ಸಮಾಜದಲ್ಲಿಯ ಪ್ರಜ್ಞಾವಂತ ಜನರು ಮೇಲಿಂದ ಮೇಲೆ ವಿವಿಧ ಕ್ರೀಡೆಗಳನ್ನು ಸಂಘಟಿಸುವ ಮೂಲಕ ಯುವಕರನ್ನು ಮತ್ತೇ ಕ್ರೀಡೆಗಳತ್ತ ಆಕರ್ಷಿಸಬೇಕು ಆ ಮೂಲಕ ನಸಿಸುತ್ತಿರುವ ಕ್ರೀಡೆಗಳನ್ನು ಉಳಿಸಿ-ಬೆಳೆಸಿಕೊಂಡು ಹೋಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಪಿಎಸ್ಐ ರಾಜಕುಮಾರ ಮತ್ತು ಕೆಇಬಿ ಅಧಿಕಾರಿ ರವೀಂದ್ರ ಮೆಟಗುಡ್ಡ ಅವರು ಮಾತನಾಡಿ ಮೇಲಿಂದ ಮೇಲೆ ಇಂತಹ ಕ್ರೀಡಾಕೂಟಗಳ ಆಯೋಜನೆ ಆಗಬೇಕು. ಕ್ರೀಕೆಟ್ ಆಟಗಾರರು ಹಾಫ್ ಪಿಚ್ ಆಡುವುದು ಕಡಿಮೆ ಮಾಡಿ ಫುಲ್ ಪಿಚ್ ಆಡುವುದನ್ನು ಮೈಗೂಡಿಸಿಕೊಳ್ಳಬೇಕು ಎಂದ ಅವರು ಪಂದ್ಯಾವಳಿಗೆ ಶುಭಕೊರಿದರು.
ವೇದಿಕೆಯ ಮೇಲೆ ಪುರಸಭೆ ಸದಸ್ಯ ನವೀನ ಕಾಟಕರ, ಪ್ರಮುಖರಾದ ಅನಿಲ ಬೆಳಗಾಂವಕರ, ಕಿರಣ ಶಟವಣ್ಣವರ, ಪ್ರಶಾಂತ ನಾಯ್ಕ, ಮಂಜು ಡಿ, ವಿವೇಕ ದಾನಪ್ಪನರ, ಪ್ರಶಾಂತ ಪಾಟಿಲ್, ಉಮೇಶ ಘಟಕಾಂಬಳೆ ಮೊದಲಾದವರು ಇದ್ದರು. ಸಚಿನ ಮಡ್ಡಿ, ಮನಿಕಂಟ ತೇಲಂಗ, ನಾಗರಾಜ ಪಾಟೀಲ್, ಅಖಿಲ ಮರಾಠೆ, ವಿಶಾಲ ಬಿಡಿಕರ, ಕಿರಣ ತೊರಣಗಟ್ಟಿ ಇದ್ದರು.
ಈ ಪಂದ್ಯಾವಳಿಯಲ್ಲಿ ಒಟ್ಟೂ 8 ಜನ ಪ್ರಾಂಚೈಸಿಗಳಿದ್ದು ಒಂದೊಂದು ಟೀಮ್ ನ ನೇತೃತ್ವ ವಹಿಸಲಾಗಿದೆ.
ಎಸ್ಎಲ್ಜಿ ಗ್ರೂಪ್- ಮಾಲೀಕರು- ಶ್ರೀನಿವಾಸ ಶ್ರೀಕಾಂತ ಘೋಟ್ನೇಕರ
ಡೋಲ್ಫಿನ್ ಕ್ರೀಕೆಟ್ ಕ್ಲಬ್ ತಂಡ – ಮಾಲೀಕರು- ಅನಿಲ ಬೆಳಗಾಂವಕರ
ಎಸ್ ಬ್ರದರ್ಸ್ ತಂಡ- ಮಾಲಿಕರು- ಕಿರಣ ಎಸ್ ಶಟವಣ್ಣವರ
ಓಂಕಾರ ತಂಡ- ಮಾಲಿಕರು- ಉಮೇಶ ಘಟಕಾಂಬಳೆ
ಶ್ರೀ ಸಾಯಿ ತಂಡ-ಮಾಲಿಕರು- ಪ್ರಶಾಂತ ನಾಯಕ
ಆರ್ಎಮ್ಬಿ ಗ್ರೂಪ್- ಮಾಲಿಕರು- ಅಝರ್ ಬಸರಿಕಟ್ಟಿ
ಜೈ ಹನುಮಾನ ಅರ್ಥ ಮೂವರ್ಸ್ ತಂಡ-ಮಾಲಿಕರು-ವಿವೇಕ ದಾನಪ್ಪನವರ ಮತ್ತು ಮಂಜು ಡಿ.
ಜಿ ಕೆ ಎಮಪಾಯರ್ಸ್ ತಂಡ – ಮಾಲಿಕರು- ನವೀನ ಪ್ರಕಾಶ ಕಾಟಕರ.
Leave a Comment