ಭಟ್ಕಳ: ತಾಲೂಕಿನ ಗಣೇಶ ನಗರದ ಬಯಲು ಪ್ರದೇಶದಲ್ಲಿ ಆಕಸ್ಮಿಕವಾಗಿ ಹೊತ್ತುಕೊಂಡ ಬೆಂಕಿ ಪ್ರಮಾಣ ಹೆಚ್ಚಾಗಿ ನಂತರ ಸಮೀಪವಿರುವ ಗುಜರಿ ಅಂಗಡಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿರುವ ಘಟನೆ ಸೋಮವಾರ ನಡೆದಿದೆ.
ಅಲ್ಲೇ ಸಮೀಪವಿರುವ ರೈಲ್ವೆ ಹಳಿಯ ಪಕ್ಕದಲ್ಲಿನ ಬಯಲು ಪ್ರದೇಶದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು. ನಂತರ ಗಾಳಿ ಪ್ರಮಾಣ ಹೆಚ್ಚಾಗಿರುವುದರಿಂದ ಬೆಂಕಿ ಪ್ರಮಾಣ ಸುಮಾರು 500 ಮೀಟರ ದೂರ ವ್ಯಾಪಿಸಿ ಅಲ್ಲೇ ಸಮೀಪ ರಾಷ್ಟಿಯ ಹೆದ್ದಾರಿ ಪಕ್ಕದಲ್ಲಿದ್ದ ಗುಜರಿ ಅಂಗಡಿಗೆ ತಗುಲಿದ್ದು. ಅಂಗಡಿಯ ಹಿಂಬಾಗದಲ್ಲಿರುವ ಪ್ಲಾಸ್ಟಿಕ್ ಸಾಮಾಗ್ರಿಗಳಿಗೆ ಬೆಂಕಿ ತಗಲುತ್ತಿದ್ದನಂತೆ ಬೆಂಕಿ ಕೆನ್ನಾಲಿಗೆ ಹೆಚ್ಚಾಗಿ ಹೊಗೆ ಹೆದ್ದಾರಿಯಲ್ಲಿ ಆವರಿಸಿಕೊಂಡ ಪರಿಣಾಮ ಕೆಲ ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರ ಕೆಲ ಕಾಲ ಸ್ಥಗಿತಗೊಳಿಸಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಬೆಂಕಿ ನಂದಿಸುವ ಕಾರ್ಯ ಮುಂದುವರಿಸಿದ್ದು ಇದಕ್ಕೆ ಸ್ಥಳೀಯರು ಸಹಕರಿಸಿದ್ದಾರೆ ಹಾಗೂ ನಗರ ಠಾಣೆಯ ಸಿಪಿಐ, ಪಿ.ಎಸ್.ಐ ಹಾಗೂ ಸಿಬ್ಬಂದಿಗಳು ಅಸ್ತವ್ಯಸ್ತ ಗೊಂಡ ವಾಹನ ಸಂಚಾರ ಬಗೆಹರಿಸುತ್ತೀರಿವುದು ಕಂಡುಬಂತು.
Leave a Comment