ಹೊನ್ನಾವರ; ತಾಲೂಕಿನ ಕಡಗೇರಿ ಗುಂಡಿಬೈಲ್ ಕ್ರಾಸ್ ಹತ್ತಿರ ಗೇರುಸೊಪ್ಪಾ ಕಡೆಯಿಂದ ಹೊನ್ನಾವರ ಭಾಗಕ್ಕೆ ಅತಿವೇಗದಿಂದ ನಿಲಕ್ಷತನದಿಂದ ಚಾಲನೆ ಮಾಡಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿಯಾಗಿದೆ.ವಾಹನದಲ್ಲಿದ್ದ ಅಬ್ದುಲ್ ಗನಿ ಗೌಸುಸಾಬ್ ಪಾಟೀಲ್ ಸ್ಥಳದಲ್ಲೆ ಮೃತಪಟ್ಟರೆ ಹಾವೇರಿ ಮೂಲದ ಬಸವರಾಜ ನರಸಪ್ಪ ಕೊರವಾರ ಹಾಗೂ ಚಾಲಕ ಗಣೇಶ ಕೆಂಚಪ್ಪ ಲಿಂಗದಹಳ್ಳಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹೊನ್ನಾವರ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
Leave a Comment