ಹೊನ್ನಾವರ: ತಾಲೂಕಿನ ಮಂಕಿ ಮುಳಗೋಡ ಗ್ರಾಮದ ಜಡ್ಡಿಯಲ್ಲಿ ಮೇಯಲು ಬಿಟ್ಟ ಆಕಳನ್ನು ಕಸಾಯಿಖಾನೆಗೆ ವಧೆ ಮಾಡುವ ಉದ್ದೇಶದಿಂದ ವ್ಯಕ್ತಿಯೊರ್ವ ಸಾಗಿಸಿರುವ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿತ ವ್ಯಕ್ತಿ ಮಂಕಿ ಜಡ್ಡಿಯ ರಾಮಾ ಮರ್ತಪ್ಪ ನಾಯ್ಕ ಎಂದು ಗುರುತಿಸಲಾಗಿದೆ.ಜ.12 ರಂದು ಗಣಪಯ್ಯ ಗೌಡ ಅವರು ಮೇಯಲು ಬಿಟ್ಟ ಕಪ್ಪು ತಳಿಯ ಒಂದು ಜೆರ್ಸಿ ಆಕಳು ಕಳುವಾಗಿತ್ತು ಎನ್ನಲಾಗಿದೆ. ಈ ವಿಚಾರವಾಗಿ ಗೋವಿನ ಮಾಲೀಕ ಗಣಪಯ್ಯ ಅವರು ಆರೋಪಿತ ವ್ಯಕ್ತಿ ರಾಮಾ ಅವರ ಮನೆಯ ಹತ್ತಿರ ಕೇಳಲು ಹೋದಾಗ ಆರೋಪಿಯು ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ದೂಡಿ ಹಾಕಿ ಜೀವ ಬೆದರಿಕೆ ಹಾಕಿದ್ದಾನೆಂದು ಮಂಕಿ ಪೋಲಿಸ್ ಠಾಣಿಯಲ್ಲಿ ದೂರು ದಾಖಲಾಗಿದೆ.
Leave a Comment