ಹೊನ್ನಾವರ ತಾಲೂಕಿನ 24 ಪಂಚಾಯತಿಗೆ ನಡೆಯಬೇಕಿದ್ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆಯಲ್ಲಿ ನವಿಲಗೋಣ ಪಂಚಾಯತಿ ಕೊರ್ಟ ತಡೆಯಾಜ್ಞೆ ನೀಡಿ ಮಧ್ಯಾಹ್ನ ಬಳಿಕ ಚುನಾವಣಾ ಪ್ರಕ್ರಿಯೆ ಆರಂಭವಾಯಿತು. ಖರ್ವಾ ಪಂಚಾಯತಿ ಸದಸ್ಯರ ಅಪಹರಣ ಪ್ರಹಸನದಿಂದ ಆಯ್ಕೆ ಸ್ಥಗಿತಗೊಂಡಿದ್ದು, ಉಳಿದ 22 ಪಂಚಾಯತಿಯಲ್ಲಿ ಶಾಂತಿಯುತವಾಗಿ ಆಯ್ಕೆ ನಡೆಯಿತು.
ಕಡತೋಕಾ ಅಧ್ಯಕ್ಷರಾಗಿ ಕೃಷ್ಣ ಗಿರಿಯಾ ಗೌಡ, ಉಪಾಧ್ಯಕ್ಷರಾಗಿ ಲಕ್ಷ್ಮೀ ಶ್ರೀಕಾಂತ ಮಡಿವಾಳ, ಕಡ್ಲೆ ಅಧ್ಯಕ್ಷರಾಗಿ ಗೋವಿಂದ ಗೌಡ ಉಪಾಧ್ಯಕ್ಷರಾಗಿ ಭಾಗೀರಥಿ ಭಟ್, ಹೊಸಾಕುಳಿ ಅಧ್ಯಕ್ಷರಾಗಿ ನಾಗರತ್ನ ನಾಯ್ಕ, ಉಪಾಧ್ಯಕ್ಷರಾಗಿ ಕಿರಣ ಹೆಗಡೆ, ಹಡಿನಬಾಳ ಅಧ್ಯಕ್ಷರಾಗಿ ಸುನೀತ ನಾಗರಾಜ ಶೇಟ್ ಉಪಾಧ್ಯಕ್ಷರಾಗಿ ಶ್ರೀಧರ ಗೊವಿಂದ ನಾಯ್ಕ, ಜಲವಳ್ಳಿ ಅಧ್ಯಕ್ಷರಾಗಿ ಮಂಜುಳಾ ಗೌಡ, ಉಪಾಧ್ಯಕ್ಷರಾಗಿ ಚಂದ್ರಹಾಸ್ ನಾಯ್ಕ, ಕುದ್ರಗಿ ಅಧ್ಯಕ್ಷರಾಗಿ ಮಂಗಲಾ ಕಾಂತ ನಾಯ್ಕ, ಉಪಾಧ್ಯಕ್ಷರಾಗಿ ಅದಂ ಅಬ್ದುಲ್ ಅಜೀದ್ ಖಾನ್, ಮೇಲಿನಇಡಗುಂಜಿ ಅಧ್ಯಕ್ಷರಾಗಿ ಮನೋಹರ ಅಂತೋನ್ ಡಯಾಸ್, ಉಪಾಧ್ಯಕ್ಷರಾಗಿ ರಾಧಾ ದೀನ್ ದಯಾಳ್, ಕರ್ಕಿ ಅಧ್ಯಕ್ಷರಾಗಿ ಕಲ್ಪನಾ ಪ್ಲೋರಾ ನರೋನಾ, ಉಪಾಧ್ಯಕ್ಷರಾಗಿ ಪುರ್ಣಿಮಾ ಗಿರೀಶ ಹೆಗಡೆ, ಹಳದೀಪುರ ಅಧ್ಯಕ್ಷರಾಗಿ ಅಜಿತ್ ನಾಯ್ಕ, ಉಪಾಧ್ಯಕ್ಷರಾಗಿ ಪುಷ್ಪಾ ನಾಯ್ಕ, ಚಿಕ್ಕನಕೋಡ ಅಧ್ಯಕ್ಷರಾಗಿ ವಿಘ್ನೇಶ್ವರ ಹೆಗಡೆ, ಉಪಾಧ್ಯಕ್ಷರಾಗಿ ಆಶಾ ನಾಯ್ಕ, ಹೆರೇಂಗಡಿ ಅಧ್ಯಕ್ಷರಾಗಿ ಪ್ರಮೋದ ನಾಯ್ಕ, ಉಪಾಧ್ಯಕ್ಷರಾಗಿ ಭಾರತಿ ನಾರಾಯಣ ನಾಯ್ಕ, ನಗರಬಸ್ತಿಕೇರಿ ಅಧ್ಯಕ್ಷರಾಗಿ ಮಂಜುನಾಥ ನಾಯ್ಕ, ಉಪಾಧ್ಯಕ್ಷರಾಗಿ ಜಯಂತಿ ನಾಯ್ಕ, ಮಾಗೋಡ್ ಅಧ್ಯಕ್ಷರಾಗಿ ಶಿವರಾಮ ಹೆಗಡೆ ಉಪಾಧ್ಯಕ್ಷರಾಗಿ ಬಾಷಾ ಸಾಬ್, ಕಾಸರಕೋಡ್ ಅಧ್ಯಕ್ಷರಾಗಿ ಮಂಜು ಗೌಡ ಉಪಾಧ್ಯಕ್ಷರಾಗಿ ಅನಿತಾ ನಾಯ್ಕ, ಕೆಳಗಿನೂರು ಅಧ್ಯಕ್ಷರಾಗಿ ಗಂಗಾಧರ ಗೌಡ, ಉಪಾಧ್ಯಕ್ಷರಾಗಿ ನೀಲಾ ಕೃಷ್ಣ ಗೌಡ ಚಂದಾವರ ಅಧ್ಯಕ್ಷರಾಗಿ ಛಾಯ ಅರುಣ ಉಬಯಕರ್, ಉಪಾಧ್ಯಕ್ಷರಾಗಿ ಅಶ್ರಫ್ ಅಲಿ ಅಬ್ದುಲ್ ಗಫರ್ ಗನಿ, ಸಾಲ್ಕೋಡ್ ಅಧ್ಯಕ್ಷರಾಗಿ ರಜನಿ ನಾಯ್ಕ, ಉಪಾಧ್ಯಕ್ಷರಾಗಿ ಸಚೀನ ನಾಯ್ಕ, ಮುಗ್ವಾ ಅಧ್ಯಕ್ಷರಾಗಿ ಗೌರಿ ಅಂಬಿಗ, ಉಪಾಧ್ಯಕ್ಷರಾಗಿ ರೀಟಾ ಲೋಫಿಸ್, ಉಪ್ಪೂಣಿ ಅಧ್ಯಕ್ಷರಾಗಿ ಮಾದೇವಿ ಮಾದೇವ ಉಪ್ಪಾರ, ಉಪಾಧ್ಯಕ್ಷರಾಗಿ ನೊರೋನಾ ಲವಿಟಾ ಸಂಜೀವ, ಕೊಡಾಣಿ ಅಧ್ಯಕ್ಷರಾಗಿ ಚೇತನಾ ಮಡಿವಾಳ, ಉಪಾಧ್ಯಕ್ಷರಾಗಿ ಮಣಿಕಂಠ ನಾಯ್ಕ, ಬಳಕೂರು ಅಧ್ಯಕ್ಷರಾಗಿ ವಿನುತಾ ಪೈ, ಉಪಾಧ್ಯಕ್ಷರಾಗಿ ಕೇಶವ ನಾಯ್ಕ, ಮಾವಿನಕುರ್ವಾ ಪಂಚಾಯತಿಗೆ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಸದೇ ಇರುದರಿಂದ ಉಪಾಧ್ಯಕ್ಷರಾಗಿ ಜಿ.ಜಿ.ಶಂಕರ್ ಆಯ್ಕೆಯಾಗಿದ್ದಾರೆ.
Leave a Comment