ಹೊನ್ನಾವರ : ಗ್ರಾಮೀಣ ಹಾಗೂ ಪಟ್ಟಣದಲ್ಲಿ ಅಂಚೆಪತ್ರಗಳನ್ನು ಮನೆಮನೆಗೆ ತಲುಪಿಸುವ ಪೋಸ್ಟಮ್ಯಾನಗಳನ್ನು ಸೇವೆ ಸ್ಮರಿಸುವ ಭಾವನೆಗಳ ಕಿಂದರಿ ಜೋಗಿ ಎನ್ನುವ ವಿನೂತನ ಕಾರ್ಯಕ್ರಮ ಹೊನ್ನಾವರ ಯುವಾ ಬ್ರಿಗೇಡ್ ವತಿಯಿಂದ ಜರುಗಿತು.
ಕರೋನಾ ಸಂಧರ್ಬದಲ್ಲಿ ಪೋಸ್ಟ್ಮ್ಯಾನ್ಗಳ ಸೇವೆಯನ್ನು ಸ್ಮರಿಸಿ ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಯವರ ಮಾರ್ಗದರ್ಶನದಲ್ಲಿ ಇಡೀ ರಾಜ್ಯದಲ್ಲಿ ಪೋಸ್ಟ್ಮ್ಯಾನ್ಗಳನ್ನು ಕಿಂದರಿ ಜೋಗಿ ಎನ್ನುವ ಕಾರ್ಯಕ್ರಮದಡಿಯಲ್ಲಿ ಗೌರವ ಸಲ್ಲಿಸುತ್ತಿದ್ದು, ಹೊನ್ನಾವರ ಯುವಾಬ್ರಿಗೇಡ್ ಚಕ್ರವರ್ತಿ ಸೂಲಿಬೆಲೆಯವರ ನೇತೃತ್ವದಲ್ಲಿ ಪೋಸ್ಟ್ ಮ್ಯಾನ್ಗಳಿಗೆ ಸನ್ಮಾನಿ ಪ್ರಶಸ್ತಿ ಪತ್ರ ವಿತರಣೆ ಮಾಡಿದರು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಸಮಾಜದ ಕೊನೆಯ ವ್ಯಕ್ತಿಗೆ ತಲುಪುವ ವ್ಯಕ್ತಿಯನ್ನು ನಾವು ಗುರುತಿಸಿ ಅವರನ್ನು ಸನ್ಮಾನಿಸುತ್ತೇವೆ. ಕರೋನಾ ಸಂಧರ್ಬದಲ್ಲಿ ಅಂಚೆಯಣ್ಣಂದಿರ ಅವಿರತ ಸೇವೆ ಸ್ಮರಿಸುವಂತದ್ದು. ಅವರು ಮನೆ ಮನೆಗೆ ತೆರಳಿ ಎ.ಇ.ಪಿ.ಎಸ್. ಮೂಲಕ ಬ್ಯಾಂಕ್ ಸೇವೆಗಳನ್ನು ಒದಗಿಸಿದ್ದಾರೆ. ಕರೋನಾ ಸಂಧರ್ಭದಲ್ಲಿ ಸೇವೆ ಸಲ್ಲಿಸಿದ ಎಲ್ಲರನ್ನೂ ಗುರುತಿಸಿ ಸನ್ಮಾನಿಸಲಾಗಿದೆ. ಆದರೆ ಅಂಚೆಯಣ್ಣಂದಿರನ್ನು ಯಾರೂ ಸ್ಮರಿಸಿಕೊಂಡಿಲ್ಲ. ಜನರ ಭಾವನೆಗಳನ್ನ ಅಂದರೆ ಶುಭ ಸುದ್ದಿ ಹಾಗೂ ಇನ್ನಿತರ ಸುದ್ದಿಗಳನ್ನು ತನ್ನ ಜೋಳಿಗೆಗೆ ತುಂಬಿಕೊಂಡು ಊರೂರು ಸುತ್ತಿ ಸಂಬಂಧಪಟ್ಟವರಿಗೆ ತಲುಪಿಸುವ ಕಾರ್ಯ ಅಂಚೆಯಣ್ಣನದ್ದು ಹಾಗಾಗಿ ನಾವು ಈ ಕಾರ್ಯಕ್ರಮಕ್ಕೆ ಭಾವನೆಗಳ ಕಿಂದರಿ ಜೋಗಿ ಎನ್ನುವ ಶೀರ್ಷಿಕೆಯಡಿ ಅವರನ್ನ ಗೌರವಿಸಿದ್ದೇವೆ ಎಂದರು.
ನಿವೃತ್ತಿಗೆ ಹತ್ತಿರ ಇರುವ ಮೂರು ಜನ ಪೋಸ್ಟ್ಮ್ಯಾನಗಳಿಗೆ ವಿಶೇಷವಾಗಿ ಸನ್ಮಾಸಿ, ಪ್ರಶಸ್ತಿ ಪತ್ರದ ಜೊತೆಗೆ ಜಾಕೆಟ್ ನೀಡಲಾಯಿತು.
ಈ ಸಂಧರ್ಭದಲ್ಲಿ ಅಂಚೆ ಕಛೇರಿಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಯುವಾ ಬ್ರಿಗೇಡ್ ಕಾರ್ಯಕರ್ತರು ಪಾಲ್ಗೊಂಡಿದ್ದರು.
Leave a Comment