ಹೊನ್ನಾವರ: ಕಲಾಸಿರಿ ರಂಗಭೂಮಿ ಸಾಂಸ್ಕ್ರತಿಕ ಜನಪದ ಹಾಗೂ ಕ್ರೀಡಾವೇದಿಕೆ ಹೊನ್ನಾವರ ಇವರ ವತಿಯಿಂದ 2 ವರ್ಷದ ನಾಟಕೋತ್ಸವವನ್ನು ಅರೇಅಂಗಡಿ ಎಸ್.ಕೆಪಿ ಕ್ರೀಡಾಂಗಣದಲ್ಲಿ ಫೇಬ್ರವರಿ 21ರವಿವಾರ ಸಂಜೆ 6ಗಂಟೆಗೆ ನಡೆಯಲಿದೆ. ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಲಿದ್ದು, ಸುನೀಲ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ರವಿಕುಮಾರ ಶೆಟ್ಟಿ, ಜಿಲ್ಲಾಪಂಚಾಯತ ಸದಸ್ಯರಾದ ಶಿವಾನಂದ ಹೆಗಡೆ, ಶ್ರೀಕಲಾಶಾಸ್ತ್ರಿ, ಸಾಲ್ಕೋಡ್ ಗ್ರಾಮ ಪಂಚಾಯತ ಅಧ್ಯಕ್ಷೆ ರಜನಿ ನಾಯ್ಕ, ತಾಲೂಕ ಪಂಚಾಯತ ಸದಸ್ಯೆ ರಾಧಾ ನಾಯ್ಕ, ಗೋಕರ್ಣ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜಗೋಪಾಲ ಅಡಿ, ಶಿವಾನಿ ಶಾಂತರಾಮ ಭಟ್ಕಳ, ಸಂಘಟನೆಯ ಅಧ್ಯಕ್ಷ ಎಮ್.ಎಲ್.ನಾಯ್ಕ ಉಪಸ್ಥಿತರಿರುವರು. ಸಭಾ ಕಾರ್ಯಕ್ರಮದ ಬಳಿಕ ಸಹ್ಯಾದ್ರಿ, ಅರಭಿ, ಶರಾವತಿ ತಂಡದಿಂದ ಸ್ಪರ್ಧಾತ್ಮಕ ನಾಟಕ ಆಯೋಜಿಸಲಾಗಿದೆ . ನಾಟಕಪ್ರೀಯರು, ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೋತ್ಸಾಹಿಸಬೇಕು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment