ಹೊನ್ನಾವರ; ತಾಲೂಕಿನ ಮಾವಿನಕುರ್ವಾ ಭಾಗಕ್ಕೆ ಸರಿಯಾದ ಸಮಯಕ್ಕೆ ಬಸ್ ಬಿಡುತ್ತಿಲ್ಲ ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತದೆ ಎಂದು ಆ ಭಾಗದ ವಿದ್ಯಾರ್ಥಿಗಳು ಸಮಸ್ಯೆ ಬಗೆಹರಿಸುವಂತೆ ತಾಲೂಕಾ ದಂಡಾದಿಕಾರಿಗಳ ಮೂಲಕ ನಿಯಂತ್ರಣಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.
ಇಗಾಗಲೇ ಶಾಲೆ ಕಾಲೇಜು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದ್ದು ಲಾಕ್ಡೌನ್ ಪೂರ್ವದಲ್ಲಿ ನಮ್ಮ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇತ್ತು. ನಂತರ ಶಾಲಾ ಕಾಲೇಜು ಇರದೆ ಇರುವುದರಿಂದ ಅಷ್ಟೊಂದು ಸಮಸ್ಯೆ ಆಗುತ್ತಿರಲಿಲ್ಲ. ಇದೀಗ ಕಾಲೇಜು ಆರಂಭಗೊAಡಿದ್ದು, ಪಟ್ಟಣದ ಕಾಲೇಜಿಗೆ ಬರಲು ಬಸ್ ವ್ಯವಸ್ಥಡ ತೀರಾ ಅಗತ್ಯವಾಗಿದೆ. ಬೆಳಿಗಿನ ಸಮಯದಲ್ಲಿ ಬಸ್ ಇರದೇ ಇರುದರಿಂದ ತರಗತಿಗಳಿಗೆ ಸರಿಯಾದ ಸಮಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಈ ಹಿಂದಿನAತೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ತಹಶಿಲ್ದಾರ ಮೂಲಕ ವಿಭಾಗದ ನಿಯಂತ್ರಣಾಧಿಕಾರಿ ಯವರಿಗೆ ಮನವಿ ಸಲ್ಲಿಸಿದರು.
ದಂಡಾಧಿಕಾರಿ ವಿವೇಕ್ ಶೇಣ್ವಿ ಮನವಿ ಸ್ವಿಕರಿಸಿದರು.
ಕಾಲೇಜು ವಿದ್ಯಾರ್ಥಿ ಗಣೇಶ ಗೌಡ ಮಾತನಾಡಿ ಲಾಕ್ಡೌನ್ ಪೂರ್ವದಲ್ಲಿ ಬಸ್ ವ್ಯವಸ್ಥೆ ಸರಿಯಾಗಿತ್ತು. ತಾಲೂಕ ಕೇಂದ್ರದಲ್ಲಿರುವ ಕಾಲೇಜಿಗೆ ಬರಲು ಬಸ್ ತೀರಾ ಅಗತ್ಯವಿರುವ ಗ್ರಾಮದಲ್ಲಿ ನಮ್ಮ ಗ್ರಾಮವು ಒಂದಾಗಿದೆ. ಬಸ್ ಇಲ್ಲದೆ ಪ್ರತಿನಿತ್ಯ ಬೆಳಗಿನ ಅವಧಿಯ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಸಮಸ್ಯೆ ಮನಗಂಡು ಈ ಹಿಂದಿನAತೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದರು.
ಕ ರ ವೆ ಹೊನ್ನಾವರ ತಾಲೂಕಾ ಅಧ್ಯಕ್ಷ ಮಂಜುನಾಥ ಗೌಡ ಮಾತನಾಡಿ ಗ್ರಾಮಿಣ ಭಾಗದಲ್ಲಿ ಬಸ್ ಸಂಚಾರ ಸರಿಯಾಗಿ ಇಲ್ಲದೆ ಹಲವು ಗ್ರಾಮದ ವಿದ್ಯಾರ್ಥಿಗಳು ತರಗತಿಗೆ ಸರಿಯಾಗಿ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರು ಪಟ್ಟಣಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಭಾಗದವರ ಬಗ್ಗೆ ಮತ್ತು ವಿದ್ಯಾರ್ಥಿಗಳ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಿಗಳು ಕಾಳಜಿ ವಹಿಸುತ್ತಿಲ್ಲಾ ಎನ್ನುವುದಕ್ಕೆ ಇದೇ ಸಾಕ್ಷಿಯಾಗಿದೆ. ಇದೆ ರೀತಿ ಮುಂದುವರಿದರೆ ವಿದ್ಯಾರ್ಥಿಗಳ ನೇತ್ರತ್ವದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಮನೋಜ ನಾಯ್ಕ, ಭರತ್, ವಿನಯ, ಮನೋಜ ಗೌಡ, ಮತ್ತಿತರರು ಹಾಜರಿದ್ದರು.
Leave a Comment