ಹೊನ್ನಾವರ: ಶರಾವತಿ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚೀವರು ಕೊರೋನಾ ಸಂಕಷ್ಟದಿಂದ ಬಜೆಟ್ ಮೇಲೆ ಕೂತೂಹಲ ಮೂಡಿಸಿರುವುದು ಸಹಜ. ಜನರ ನಿರಿಕ್ಷೆ ಬಹಳಷ್ಟಿದ್ದು, ರೈತರು, ಜನರ ಹಾಗೂ ಮೀನುಗಾರರ ಪರವಾಗಿ ನೀಡಲಿದ್ದಾರೆ.
ಬೆಲೆ ಏರಿಕೆಗೆ ರಿಲೀಪ್ ಇದೆಯಾ ಎಂದು ಮರುಪ್ರಶ್ನಿಸಿದಾಗ ಬಜೆಟ್ ಮಂಡನೆ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ. ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣೆ ಬಗ್ಗೆ ಮಾಜಿಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಪ್ರತಿಕ್ರಿಯೆ ಬಗ್ಗೆ ಪ್ರಶ್ನಿಸಿದಾಗ ಭವಯ ರಾಮಮಂದಿರ ನಿರ್ಮಾಣವಾಗಲಿದ್ದು, ಅದು ಐತಿಹಾಸಿಕ ಕ್ಷಣವಾಗಿ ಹೊರಹೊಮ್ಮಲಿದೆ. ನಿಧಿ ಸಮರ್ಪಣೆಗೆ ನನ್ನ ವಿಧಾನಸಭಾ ಕ್ಷೇತ್ರದಲ್ಲಿ 6 ಕೋಟಿ 23 ಲಕ್ಷ ನಿಧಿ ಸಂಗ್ರಹವಾಗಿದೆ. ವೈಯಕ್ತಿಕವಾಗಿ 51 ಲಕ್ಷ ದೇಣೆಗೆಯನ್ನು ನಾನು ನೀಡಿದ್ದೇನೆ. ಎಲ್ಲವು ಅವರವರ ಭಾವಕ್ಕೆ ಭಕುತಿಗೆ ಬಿಟ್ಟ ವಿಚಾರ ಎಂದರು.
Leave a Comment