ಭಟ್ಕಳ: ಮಹಾಶಿವರಾತ್ರಿ ಪ್ರಯುಕ್ತ ಶ್ರಿ ಜೈನ ಜಟ್ಗೇಶ್ವರ ಯುವಕ ಸಂಘ (ರಿ) ಸಭಾತಿ-ತೆರ್ನಮಕ್ಕಿ ಇವರ ಆಶ್ರಯದಲ್ಲಿ ಮುರುಡೇಶ್ವರ ಸಮುದ್ರ ತೀರದಲ್ಲಿ ಸುಂದರವಾದ “ಮುರ್ಡೇಶ್ವರ ಸ್ಯಾಂಡ ಆರ್ಟ್” ಮೂಡಿದೆ.
ಮಾಹಾ ಶಿವರಾತ್ರಿಯ ಅಂಗವಾಗಿ ಜೈನ ಜಟ್ಗೇಶ್ವರ ಯುವಕ ಸಂಘ (ರಿ) ಸಭಾತಿ-ತೆರ್ನಮಕ್ಕಿ ಇದರ ಸದಸ್ಯ ರಾದ ರಾಘವೇಂದ್ರ ಅಚಾರಿಯವರ ಕೈಚಳಕದಿಂದ ಈ ಕಲೆ ಮೂಡಿ ಬಂದಿದೆ. ಈತ ಮೂಲತಃ ಮುರುಡೇಶ್ವರದ ಕಾಯ್ಕಿಣಿ ಪಂಚಾಯತ ವ್ಯಾಪ್ತಿಯ ಸಭಾತಿಯವನಾಗಿದ್ದು ಸದ್ಯ ಉಡುಪಿ ಜಿಲ್ಲೆಯ ಚಿತ್ರ ಕಲಾ ಮಂದಿರದ ಕಲಾ ಕಾಲೇಜಿನಲ್ಲಿ ಚಿತ್ರ ಕಾಲೆಯ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು .ಹವಾಲರು ವರ್ಷಗಳಿಂದ ಮುರುಡೇಶ್ವರದ ಕಡಲ ತೀರದಲ್ಲಿ “ಸ್ಯಾಂಡ ಆರ್ಟ್”ಮಾಡಬೇಕೆಂದುಕೊಂಡ ಈತನ ಕನಸು ಈ ವರ್ಷದ ಮಹಾಶಿವರಾತ್ರಿ ಹಬ್ಬಕ್ಕೆ ನನಸಾದಂತಾಗಿದೆ. ಈತನನಿಗೆ ಜೈನ ಜಟ್ಗೇಶ್ವರ ಯುವಕ ಸಂಘ ಸಾಥ್ ನೀಡಿದ್ದಾರೆ.
ಈತ ಮರಳಿನಿಂದ ಶಿವಲಿಂಗದ ಅರ್ದಮುಖ ಶಿವನನ್ನು ಹೋಲುವ ಹಾಗೆ ಇನ್ನರ್ಧ ಮುಖ ಶಿವಲಿಂಗದ ಹಾಗೆ ನಿರ್ಮಿಸಿದ್ದು ಹಾಗೆ ನಿರ್ಮಿಸಿದ್ದು ಹಿಂಭಾದಲ್ಲಿ ಮುರುಡೇಶ್ವರದ ಶಿವ ಮೂರ್ತಿ ಹಾಗೂ ಗೋಪುರವನ್ನು ನಿರ್ಮಿಸಿದ್ದಾನೆ.ಈತನ ಈ ಕಲೆ ಅಲ್ಲಿನ ಸ್ಥಳೀಯರು ಹಾಗೆ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Leave a Comment