ಹೊನ್ನಾವರ ತಾಲೂಕಿನ ಚಿಕ್ಕನಕೊಡ್ ಗ್ರಾಮದ ಶ್ರೀ ಗೋವಿಂದ ಮೂರ್ತಿ ದೇವರ ಪುನರ್ ಪ್ರತಿಷ್ಠಾಪನೆ ಹಾಗೂ 33ನೇ ಪ್ರತಿಷ್ಠಾವಧರ್ಂತಿ ಉತ್ಸವ ನಿಮಿತ್ತ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ಸಂಪನ್ನವಾಯಿತು.
ಶ್ರೀ ದೇವರ ಪುನರ್ ಪ್ರತಿಷ್ಠಾ 33ನೇ ವಧರ್ಂತಿ, ಮಹೋತ್ಸವದ ನಿಮಿತ್ತ,ಪ್ರಾರ್ಥನೆಯೊಂದಿಗೆ ಗ್ರಾಮೋತ್ಸವ, ಶ್ರೀ ದೇವರ ಪ್ರೀತ್ಯರ್ಥ ಹಾಗೂ ಭಜಕ ಮಹಾ ಜನರ ಅಭ್ಯುದಯಾರ್ಥ ಶ್ರೀ ದೇವರಿಗೆ ಕ್ಷೀರಾಭಿಷೇಕ, ಮಹಾ ಪಂಚಾಮೃತಾಭಿಷೇಕ, ಸಹಸ್ರ ಕುಂಭಾಭಿಷೇಕ, ಸಾಮೂಹಿಕ ಶ್ರೀ ಸತ್ಯನಾರಾಯಣ ವೃತ ಕಲಶ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಮಧ್ಯಾಹ್ನ 12.30 ರಿಂದ ಶ್ರೀ ದೇವರ ನಿರೀಕ್ಷಣೆಯ ಮಂಗಲ ದ್ರವ್ಯಗಳನ್ನು ಸ್ಪರ್ಧಾತ್ಮಕ ರೂಪದಲ್ಲಿ ಸ್ವೀಕರಿಸುವುದು, ನಂತರ ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಿತು .ಸಾಯಂಕಾಲ ಭಜನಾ ಕಾರ್ಯಕ್ರಮ, ಪಲ್ಲಕ್ಕಿ ಪ್ರಾಕಾರೋತ್ಸವ, ಅಷ್ಟಾವಧಾನಸೇವೆ ಮಹಾಪೂಜೆ ನಡೆಯಿತು. ತಾಲೂಕಿನ ವಿವಿಧೆಡೆಯಿಂದ ಶ್ರೀ ಕ್ಷೇತ್ರಕ್ಕೆ ಭಕ್ತಾಧಿಗಳು ಆಗಮಿಸಿ ಶ್ರೀ ದೇವರಿಗೆ ವಿವಿಧ ಸೇವೆ ಸಲ್ಲಿಸಿ ದೇವತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಕೃತಾರ್ಥರಾದರು.
Leave a Comment