• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಚುನಾವಣೆ ಕಾರಣ – ರೈತರ ಬಂದೂಕು ಬೆಳೆ ಕಾಯುವುದಕ್ಕಿಂತ ಪೊಲೀಸ್ ಸ್ಟೇಷನ್ ಕಾಯುವುದೇ ಹೆಚ್ಚು

March 25, 2021 by Lakshmikant Gowda Leave a Comment

ಒಂದೆಡೆ ಬೆಳೆದ ಬೆಳೆಗಳಿಗೆ ಕಾಡು ಪ್ರಾಣಿಗಳ ಹಾವಳಿ ಇನ್ನೊಂದೆಡೆ ಬಂದೂಕು ಲೈಸನ್ಸ್ ನವೀಕರಣಕ್ಕೆ ನೂರೊಂದು ನಿಯಮಗಳ ತೊಡಕು.. ನಡುವೆ ದಾರಿ ಕಾಣದಾದ ರೈತರು

ಹೊನ್ನಾವರ – ಹಂದಿ, ಮಂಗ, ಕಡವೆ ಮುಂತಾದ ಕಾಡು ಪ್ರಾಣಿಗಳನ್ನು ಬೆದರಿಸಿ ತಾವು ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಲು ಬಂದೂಕು ಹೊಂದಲು ರೈತರಿಗೆ ಅವಕಾಶವಿದೆಯಾದರೂ ಪದೇ ಪದೇ ಎದುರಾಗುವ ಚುನಾವಣೆಯ ಕಾರಣದಿಂದ ಬಂದೂಕು ರೈತರ ಬಳಿ ಇರುವುದಕ್ಕಿಂದ ಪೊಲೀಸ್ ಠಾಣೆಯಲ್ಲಿ ಇರುವ ಅವಧಿಯೇ ಹೆಚ್ಚು ಎನ್ನುವ ಗೊಣಗಾಟ ಕೇಳಿಬರುತ್ತಿದೆ.

1616586788250 1


ವನ್ಯ ಜೀವಿ ಸಂರಕ್ಷಣಾ ಖಾಯಿದೆ ಜಾರಿಯಾದ ನಂತರ ಕಾಡು ಪ್ರಾಣಿಗಳನ್ನು ಪಕ್ಷಿಗಳನ್ನು ಬೇಟೆಯಾಡುವುದು ಶಿಕ್ಷಾರ್ಹ ಅಪರಾಧವೆನಿಸಿಕೊಂಡಿದೆ. ಆದರೆ ಕಾಡು ಪ್ರಾಣಿ ಹಾಗೂ ಪಕ್ಷಿಗಳಿಂದ ರೈತರು ತಾವು ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಲು ಬಂದೂಕು ಅತೀ ಅಗತ್ಯ ಎನ್ನುವುದು ಹಲವು ರೈತರ ಅಭಿಪ್ರಾಯ. ಬಂದೂಕು ಇದ್ದ ಮಾತ್ರಕ್ಕೆ ಪ್ರಾಣಿ ಪಕ್ಷಿಗಳನ್ನು ಬೇಟೆಯಾಡಲೇ ಬೇಕು ಎನ್ನುವುದೇನು ಇಲ್ಲ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕವೂ ಕಾಡು ಪ್ರಾಣಿಗಳನ್ನು ಓಡಿಸಬಹುದು, ಅದರಲ್ಲಿಯೂ ಮರದಿಂದ ಮರಕ್ಕೆ ಹಾರುವ ಮಂಗಗಳಿಗೆ ಯಾವ ಬೇಲಿಗಳು ಲೆಕ್ಕಕ್ಕೆ ಬರುವುದಿಲ್ಲ. ಬಂದೂಕು ಇದ್ದರೆ ಮಾತ್ರ ಅವುಗಳನ್ನು ಹೆದರಿಸಬಹುದು.
ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯೊಂದರಲ್ಲಿಯೇ 423 ಲೈಸನ್ಸ್ ಇರುವ ಬಂದೂಕು ಇದೆ ಎನ್ನುವ ಮಾಹಿತಿ ಇದೆ. ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಲೈಸನ್ಸ್ ಇರುವ ಬಂದೂಕುಗಳನ್ನು ಪೊಲೀಸ್ ಇಲಾಖೆಗೆ ಸರಂಡರ್ ಮಾಡಿ ಚುನಾವಣೆ ಮುಗಿದ ನಂತರ ವಾಪಸ್ಸು ಪಡೆದಕೊಳ್ಳಬೇಕು. ಬಂದೂಕುಗಳ ಲೈಸನ್ಸ್ ಅನ್ನು ನವೀಕರಿಸಿಕೊಳ್ಳುವುದೂ ಸುಲಭವಲ್ಲ ತಂದೆಯ ಹೆಸರಿನಲ್ಲಿರುವ ಬಂದೂಕನ್ನು ಮಗನ ಹೆಸರಿಗೆ ವರ್ಗಾಯಿಸಿಕೊಳ್ಳುವುದೂ ಕ್ಲಿಷ್ಟಕರವಾಗಿ ಪರಿಣಮಿಸಿದೆ. ವಯಸ್ಸಿನ ದೃಢೀಕರಣ ಪ್ರಮಾಣಪತ್ರ, ಆರೋಗ್ಯವಂತರಾಗಿದ್ದಾರೆನ್ನುವ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ, ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದಿರುವ ಬಗ್ಗೆ ಪೊಲೀಸ್ ಇಲಾಖೆಯ ದೃಢೀಕರಣಗಳನ್ನು ಪೂರೈಸಿಯೂ ಲೈಸನ್ಸ್ ನವೀಕರಣ ಸಾಧ್ಯವಾಗದ ಬಗ್ಗೆ ಸಾರ್ವಜನಿಕರು ದೂರುತ್ತಿದ್ದಾರೆ.
ಅಭಯಾರಣ್ಯದ ಅಡಕತ್ತರಿ
ಬಂದೂಕು ಲೈಸನ್ಸ್ ನವೀಕರಣಕ್ಕೆ ಜಿಲ್ಲಾಡಳಿತ ಕೆಲ ನಿಯಮಗಳನ್ನು ವಿಧಿಸಿದೆ, ನಿಯಮಾವಳಿಗಳಲ್ಲಿ ಪ್ರಮುಖವಾದುದು ಅರಣ್ಯ ಇಲಾಖೆಯಿಂದ ಪಡೆಯಬೇಕಾದ ಕ್ಲಿಯರೆನ್ಸ್ ಸರ್ಟಿಪಿಕೇಟ್. ತಾಲೂಕಿನ ಬಹುಭಾಗ ಉದ್ದೇಶಿತ ಅಭಯಾರಣ್ಯ ವ್ಯಾಪ್ತಿಗೆ ಒಳಪಡುವ ಕಾರಣ ಅರಣ್ಯ ಇಲಾಖೆಯಿಂದ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆದುಕೊಳ್ಳುವುದು ಸುಲಭವಲ್ಲ, ( ಹೆಚ್ಚಿನ ಸಂದರ್ಭಗಳಲ್ಲಿ ಕೊಡುವುದೇ ಇಲ್ಲ) ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಇಲ್ಲದೇ ಬಂದೂಕು ಲೈಸನ್ಸ್ ನವೀಕರಣವಾಗುವುದಿಲ್ಲ ಬೆಳೆಯ ರಕ್ಷಣೆಗೆ ನೀಡಿದ ಬಂದೂಕು ಪೊಲೀಸ್ ಠಾಣೆಯಲ್ಲಿ ಕೊಳೆಯುತ್ತಿದ್ದರೆ ಪ್ರಯೋಜನವೇನು ಎನ್ನುವುದು ರೈತರ ಪ್ರಶ್ನೆಯಾಗಿದೆ.
ಫಸಲು ಕೈಗೆ ಬರುವ ಸಮಯದಲ್ಲಿ ಹೊಲ ಗದ್ದೆಗಳಲ್ಲಿ ಪ್ರಾಣಿ ಪಕ್ಷಿಗಳ ಹಾವಳಿ ಹೆಚ್ಚಾಗಿರುತ್ತದೆ. ಆ ಸಮಯದಲ್ಲಿ ಬಂದೂಕಿನ ಅವಶ್ಯಕತೆ ಹೆಚ್ಚಿರುತ್ತದೆ ಆದರೆ ಸದ್ಯದ ಪರಿಸ್ಥಿತಿಯಲ್ಲಿ ವಯಸ್ಸಾದ ತಂದೆಯ ಹೆಸರಿನಲ್ಲಿರುವ ಬಂದೂಕು ಲೈಸನ್ಸ್‍ನ್ನು ಮಗನ ಹೆಸರಿಗೆ ವರ್ಗಾಯಿಸಿಕೊಳ್ಳುವುದೂ ಸಾಧ್ಯವಾಗದೇ ಪರದಾಡುವಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಕಾಳಜಿ ವಹಿಸಿ ಬಂದೂಕು ಲೈಸನ್ಸ್ ನವೀಕರಣಕ್ಕೆ ಮತ್ತು ವರ್ಗಾವಣೆಗೆ ಅನುಕೂಲಮಾಡಿಕೊಡಬೇಕಾದ ಅಗತ್ಯವಿದೆ – ಶ್ರೀಪಾದ ಶೆಟ್ಟಿ, ಜಲವಳ್ಳಿ

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News, Trending, ಪುರವಣಿಗಳು Tagged With: Animal Bird Hunting, Animal Birding, bandooku licence, District Rules, Firearms License Renewal, Forest Department Clearance, Gun License Renewal, In the fields, License Renewal, Wild Beasts, Wildlife Conservation Decline, ಅರಣ್ಯ ಇಲಾಖೆಯ ಕ್ಲಿಯರೆನ್ಸ್, ಕಡವೆ ಮುಂತಾದ ಕಾಡು ಪ್ರಾಣಿಗಳನ್ನು ಬೆದರಿಸಿ, ಕಾಡು ಪ್ರಾಣಿಗಳ ಹಾವಳಿ, ಜಿಲ್ಲಾಡಳಿತ ಕೆಲ ನಿಯಮ, ಪ್ರಾಣಿ ಪಕ್ಷಿಗಳ ಹಾವಳಿ, ಪ್ರಾಣಿ ಪಕ್ಷಿಗಳನ್ನು ಬೇಟೆ, ಬಂದೂಕು ಲೈಸನ್ಸ್ ನವೀಕರಣ, ಮಗ, ಲೈಸನ್ಸ್ ನವೀಕರಣ, ಲೈಸನ್ಸ್ ನವೀಕರಣ ಸಾಧ್ಯ, ವನ್ಯ ಜೀವಿ ಸಂರಕ್ಷಣಾ ಖಾಯಿದೆ, ಹಂದಿ, ಹೊಲ ಗದ್ದೆಗಳಲ್ಲಿ

Explore More:

About Lakshmikant Gowda

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...