ಹೊನ್ನಾವರ: ತಾಲೂಕಿನ ಪೋಲಿಸ್ ಠಾಣೆಯ ಮೇಲ್ಭಾಗದಲ್ಲಿ ಪಿಎಸೈ ಶಶಿಕುಮಾರ ಅಧ್ಯಕ್ಷತೆಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ಶಾಂತಿ ಸಭೆ ಜರುಗಿತು. ಸಭೆ ಉದ್ಧೇಶಿಸಿ ಮಾತನಾಡಿ ಈ ಬಾರಿ ಕೋರೋನಾ ಹಿನ್ನಲೆಯಲ್ಲಿ ಮುಂಜಾಗ್ರತೆ ವಹಿಸಿ ಹಬ್ಬ ಆಚರಿಸುವಂತೆ ಸಲಹೆ ನೀಡಿದರು.
ರಾಸಾಯುನಿಕಯುಕ್ತ ಬಣ್ಣಗಳನ್ನು ಬಳಸದೇ ಶಾಂತಿಯುತವಾಗಿ ಆರೊಗ್ಯಪೂರ್ಣ ಹಬ್ಬ ಆಚರಿಸುವಂತೆ ಸಲಹೆ ನೀಡಿದರು. ಒತ್ತಾಯಪೂರ್ವಕ ಬಣ್ಣ ಹಚ್ಚದೇ ಪ್ರೀತಿಯಿಂದ ಹಬ್ಬವನ್ನು ಆಚರಿಸಿ, ಕಾನೂನಿಗೆ ದಕ್ಕೆ ಬಾರದಂತೆ ಸಾರ್ವಜನಿಕರೊಂದಿಗೆ ವರ್ತಿಸುವ ಜೊತೆ ಸಾರ್ವಜನಕರಿಗೆ ಕಿರಿಕಿರಿಯಾಗದಂತೆ ನೋಡಿಕೊಳ್ಳಿ. ಕಾಮದಹನ ಸಂದರ್ಭದಲ್ಲಿ ಬೆಂಕಿ ಹಚ್ಚುವಾಗ ಸೂಕ್ತರೀತಿಯಲ್ಲಿ ಜಾಗೃತಿ ವಹಿಸಿ ಅನಾಹುತ ಸಂಭವಿಸದಂತೆ ನೋಡಿಕೊಳ್ಳುವಂತೆ ಸಂಘಟಕರಿಗೆ ಮನವಿ ಮಾಡಿದರು.
ಪ.ಪಂ.ಅಧ್ಯಕ್ಷ ಶಿವರಾಜ ಮೇಸ್ತ, ಉಮೇಶ ಮೇಸ್ತ, ಮಂಜು ಗೌಡ, ಸಂತೋಷ ಮೇಸ್ತ, ಮೋಹನ ಶೇಟ್, ಗಣಪತಿ ಮೇಸ್ತ, ಪಿತಾಂಬರ ಮೇಸ್ತ, ಬಾಷಾ ಪಟೇಲ್, ಸಿಬ್ಬಂದಿಗಳಾದ ಶಿವಾನಂದ, ಅಶೋಕ ಮತ್ತಿತರರು ಹಾಜರಿದರು
Leave a Comment