ಹೊನ್ನಾವರ : ಸುತ್ತಲ ಜಗತ್ತಿನ ಕ್ಷಣ ಕ್ಷಣದ ಸುದ್ದಿಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಮಹತ್ವಾಕಾಂಕ್ಷೆಯೊಂದಿಗೆ ರೂಪಗೊಂಡಿರುವ ಕನ್ನಡದ ನೂತನ ‘ನೈಸ್ ನ್ಯೂಜ್ ‘ ಜಾಲತಾಣವನ್ನು ಆದಿಚುಂಚನಗಿರಿ ಶಾಖಾ ಮಠ ಕುಮಟಾದ ಕಿರಿಯ ಶ್ರೀಗಳಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು ಹೊಸ ವರ್ಷದ ಯುಗಾದಿ ಶುಭದಿನದಂದು ಚಾಲನೆ ನೀಡಿದರು. ಹೊಸ ಪ್ರಯತ್ನಕ್ಕೂ ಆಶೀರ್ವದಿಸಿದರು.

ಕುಮಟಾ ಬಿ.ಜಿ.ಎಸ್. ಸೆಂಟ್ರಲ್ ಸ್ಕೂಲ್ ಆವರಣದಲ್ಲಿರುವ ಶ್ರೀ ಮಹಾಸತಿ ಭೈರವಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಸ್ವಾಮೀಜಿಯವರು ಹಾಗೂ ಉಪಸ್ಥಿತರಿದ್ದ ಗಣ್ಯರು ವೆಬ್ಸೈಟ್ ಪೋಸ್ಟರ್ನ್ನು ಬಿಡುಗಡೆಮಾಡಿದರು.ನೈಸ್ನ್ಯೂಸ್ ಮುಖ್ಯಸ್ಥರು ವರದಿಗಾರರಾದ ಲಕ್ಷ್ಮೀಕಾಂತ ಗೌಡ ಹಾಗೂ ಸುಧಾ ಗೌಡ ದಂಪತಿಯನ್ನು ಶ್ರೀಗಳು ಆಶೀರ್ವದಿಸಿ ವೆಬ್ಸೈಟ್ ಜನಮನ್ನಣೆ ಗಳಿಸಲಿ ಎಂದು ಹಾರೈಸಿದರು.
ಶಿಕ್ಷಣ ಪ್ರೇಮಿ ಹಾಗೂ ಖ್ಯಾತ ಉದ್ಯಮಿ ಹೆಚ್.ಎನ್.ರಾಜೇಶ, ವಿಜಯನಗರ. ಹೊನ್ನಾವರ ತಾಲೂಕಾ ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮಪ್ಪ ಜಿ.ಗೌಡ, ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ, ನಿರ್ದೇಶಕ ಅಣ್ಣಪ್ಪ ನರಸ ಗೌಡ, ಜಿಲ್ಲಾ ಗ್ರಾಮ ಒಕ್ಕಲು ಯುವಬಳಗದ ಅಧ್ಯಕ್ಷ ವಿನಾಯಕ ಪಟಗಾರ, ದತ್ತಾತ್ರೇಯ ಪಟಗಾರ, ಗ್ರಾಮ ಒಕ್ಕಲು ಸಮುದಾಯಭವನ ಸಮಿತಿ ಅಧ್ಯಕ್ಷ ಮಂಜು ಪಟಗಾರ, ಗ್ರಾಮ ಒಕ್ಕಲು ನೌಕರರ ಸಂಘದ ಅಧ್ಯಕ್ಷ ಎಂ.ಕೆ.ಪಟಗಾರ, ಗಣೇಶ ಪಟಗಾರ, ಹಾಲಕ್ಕಿ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ ಮುಂತಾದವರು ಉಪಸ್ಥಿತರಿದ್ದರು.
Leave a Comment