ಹೊನ್ನಾವರ: ಕಳೆದ ಹಲವು ದಿನಗಳಿಂದ ಸಾರಿಗೆ ನೌಕರರು ನಡೆಸುವ ಮುಷ್ಕರದಿಂದ ಸಾರಿಗೆ ಸಂಸ್ಥೆ ಮತ್ತಷ್ಟು ನಷ್ಟಕ್ಕೆ ಬರಲಿದೆ. ಕೋವಿಡ್ ಸಂದರ್ಭದಲ್ಲಿ ಇಂತಹ ಮುಷ್ಟಕ ಬೇಕಿರಲಿಲ್ಲ. ಆದರೆ ಬಿಜೆಪಿ ಸರ್ಕಾರ ಕಾರ್ಮಿಕರ ಹಿತ ಕಾಯಲು ಬದ್ದವಾಗಿದ್ದು, ಕಾರ್ಮಿಕ ಇಲಾಖೆಯ ವತಿಯಿಂದ ಲಕ್ಷಾಂತರ ಜನರಿಗೆ ನೆರವಾಗಿದೆ.
ಅಲ್ಲದೇ ಬ್ಯಾಂಕ್ ಖಾತೆಗೆ ಆರ್ತಿಕ ಪುನಶ್ಚೆತನಕ್ಕಾಗಿ ಹಣ ನೀಡಲಾಗಿದೆ. ಹಲವು ಬೇಡಿಕೆ ಈಡೇರಿಕೆ ಸಿದ್ದವಿದ್ದರು ಮುಷ್ಕರ ನಡೆಸುತ್ತಿದ್ದಾರೆ. ನನ್ನ ಕ್ಷೇತ್ರ ವ್ಯಾಪ್ತಿಯ ಟೆಂಪೋ ಹಾಗೂ ರಿಕ್ಷಾ ಚಾಲಕರು ಪ್ರಾಮಾಣಿಕತೆಯಿಂದ ಸೇವೆ ನೀಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದುಬಾರಿ ಬಾಡಿಗೆ ಪಡೆಯದೇ ಜನಸ್ನೇಹಿಯಾಗಿ ಕತ್ಯರ್ವ ನಿರ್ವಹಿಸುತ್ತಿರುದರಿಂದ ಕ್ಷೇತ್ರದ ಸಾರ್ವಜನಿಕರ ಪರವಾಗಿ ಅಭಿನಂದಿಸುತ್ತೇನೆ. ಅಲ್ಲದೇ ಗ್ರಾಮೀಣ ಭಾಗದವರಿಗೆ ಬಸ್ ಇಲ್ಲದೇ ಸಮಸ್ಯೆ ಆಗುತ್ತಿದೆ ಸಾರಿಗೆ ನೌಕರರು ಮುಷ್ಕರ ವಾಪಸ್ಸ ಪಡೆದು ಕತ್ಯರ್ವಕ್ಕೆ ಹಾಜರಾಗುವಂತೆ ಮನವಿ ಮಾಡಿದರು.
Leave a Comment