ಹೊನ್ನಾವರ : ತಾಲೂಕಿನ ಗೆರುಸೋಪ್ಪಾ ನಗರಬಸ್ತಿಕೇರಿಯ ತಲತೋಟದ ಸಾರ್ವಜನಿಕ ಅರಣ್ಯ ಪ್ರದೇಶದಲ್ಲಿ ಅಂದರ- ಬಾಹರ ಜುಗಾರಾಟ ಆಡುತ್ತಿದ್ದಾಗ ಪೆÇಲೀಸರು ದಾಳಿ ನಡೆಸಿದ ಘಟನೆ ಬುಧವಾರ ನಡೆದಿದೆ.
ಆರೋಪಿತರು ಇಸ್ಪೀಟ ಎಲೆಗಳ ಮೇಲೆ ಹಣವನ್ನು ಪಂತವನ್ನಾಗಿ ಕಟ್ಟಿ ತಮ್ಮ ತಮ್ಮ ಲಾಭಗೋಸ್ಕರ ಇಸ್ಪೀಟ ಅಂದರ- ಬಾಹರ ಜುಗಾರಾಟ ಆಡುತ್ತಿದ್ದರು ಎನ್ನಲಾಗಿದೆ. ದಾಳಿ ವೇಳೆ 8960 ನಗದು ಹಾಗೂ ಜುಗಾರಾಟಕ್ಕೆ ಬಳಸಿದ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಗೇರುಸೊಪ್ಪಾ ನಗರಬಸ್ತಿಕೇರಿಯ ಸಿಂಜಾವ್ ಮಿರಾಂಡ,ಪ್ರವೀಣ ನಾಯ್ಕ, ಮಾರುತಿ ಅಂಬಿಗ,ಉಪ್ಪಿನಗೋಳಿಯ ಶ್ರೀಪಾದ ನಾಯ್ಕ, ಮೊಗೆಹಳ್ಳದ ಮಹೇಶ ನಾಯ್ಕ, ಸರಳಗಿಯ ಸುಬ್ರಾಯ ನಾಯ್ಕ ಎಂದು ತಿಳಿದು ಬಂದಿದೆ. ಈ ಕುರಿತು ಹೊನ್ನಾವರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment