ಹೊನ್ನಾವರ – ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವಿನ ವಾಗ್ವಾದವುಜಗಳಕ್ಕೆ ತಿರುಗಿ ವ್ಯಕ್ತಿಯೊಬ್ಬ ಎದುರಿದ್ದವನ ಎದೆಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದ ಭೀಕರ ಘಟನೆ ತಾಲೂಕಿನ ಚಂದಾವರದಲ್ಲಿ ನಡೆದಿದ್ದು ತಾಲೂಕನ್ನು ಬೆಚ್ಚಿಬೀಳಿಸಿದೆ.ಕೊಲೆಯಾದವನನ್ನು ಅಬು ತಲೀಬ್ ಎಂದು ಗುರುತಿಸಲಾಗಿದ್ದು ಸಲೀನ್ ಕೋಟೆಬಾಗಿಲ್ ಎಂಬಾತ ಚಾಕು ಇರಿದ ದುಷ್ಕರ್ಮಿಯಾಗಿದ್ದಾನೆ.
ಸೋಮವಾರ ಮಧ್ಯಾಹ್ನ ಇಬ್ಬರ ನಡುವೆಯೂ ಕೆಲ ಹೊತ್ತು ವಾಗ್ವಾದ ನಡೆದಿದ್ದು ಸ್ಥಳಿಯರು ಇಬ್ಬರನ್ನೂ ಸಮಾಧಾನಿಸುವ ಪ್ರಯತ್ನದಲ್ಲಿದ್ದರೂ ಕೈಯಲ್ಲಿ ಚಾಕು ಹಿಡಿದಿದ್ದ ಸಲೀನ್ ನೋಡ ನೋಡುತ್ತಲೇ ಎದುರಿದ್ದವನ ಎದೆಗೆ ಬಲವಾಗಿ ಚಾಕು ಇರಿದು ಕೊಲೆಗೈದಿದ್ದಾನೆ.ವಿಷಯ ತಿಳಿಯುತ್ತಲೇ ಹೊನ್ನಾವರ ಸಿಪಿಐ ಶ್ರೀಧರ ಎಸ್.ಆರ್, ಪಿಎಸೈ ಶಶಿಕುಮಾರ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಪಡೆದಿದ್ದಾರೆ. ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.
ಆದರೆ ಕೊಲೆಗೈದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ, ಪೋಲಿಸರು ಘಟನೆ ನಡೆದ ಎರಡು – ಮೂರು ಗಂಟೆಯಲ್ಲಿಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಕೊರೊನಾ ಲಾಕ್ಡೌನ್ ಕಾರಣಕ್ಕೆ ಮನೆಯಲ್ಲಿ ಕುಳಿತು ಜೀವ ಉಳಿಸಿಕೊಳ್ಳಲು ಎಲ್ಲರೂ ಹೋರಾಡುತ್ತಿರುವಾಗ ನೋಡ ನೋಡುತ್ತಲೇ ಜೀವ ಒಂದನ್ನು ತೆಗೆದ ಘಟನೆ ತಾಲೂಕಿನಲ್ಲಿ ಆತಂಕಕ್ಕೆ ಕಾರಣವಾಗಿದೆ.
Leave a Comment