ಹೊನ್ನಾವರ; ತಾಲೂಕಿನಲ್ಲಿ ಕೋರೋನಾ ಸೋಂಕು ಪ್ರಕರಣ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಏರುತ್ತಿದ್ದೆ. ಆದರೆ ತಾಲೂಕ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೊಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ಹಾಗೂ ಕೋವಿಡ್ ಸೊಂಕಿತರ ಆರೊಗ್ಯದಲ್ಲಿ ಏರುಪೇರಾದರೆ ಮನೆಯಿಂದ ಆಸ್ಪತ್ರೆಗೆ ಆಗಮಿಸಲು ಕಷ್ಟವಾಗುತ್ತಿದೆ. ತಾಲೂಕಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಒಂದು ವಾಹನ ಹಾಗೂ ಭಟ್ಕಳ ಶಾಸಕ ಸುನೀಲ ಒಂದು ಆಕ್ಸಿಜನ್ ಹೊಂದಿರುವ ಒಂದು ಅಂಬುಲೆನ್ಸ ಸೇವೆಗೆ ನೀಡಿದ್ದಾರೆ. ಆದರೆ ಸಂಸ್ಥೆಯ ವಾಹನ ಇಡೀ ತಾಲೂಕಿಗೆ ಬಳಕೆ ಗೆ ಸಿದ್ದವಿದ್ದು, ಭಟ್ಕಳ ಶಾಸಕರ ಕೊಡುಗೆ ವಾಹನ ತಾಲೂಕಿನ ಭಟ್ಕಳ ಕ್ಷೇತ್ರಕ್ಕೆ ಮಾತ್ರ ಸಿಮೀತವಾಗಿದೆ. ಸದ್ಯ ಪಟ್ಟಣ ಹಾಗೂ ಕುಮಟಾ ಕ್ಷೇತ್ರ ವ್ಯಾಪ್ತಿಯ ನವಿಲಗೋಣ, ಕರ್ಕಿ,ಸಾಲ್ಕೋಡ್ ಭಾಗದಲ್ಲಿ ಸೋಂಕು ಪ್ರಮಾಣ ಹೆಚ್ಚಿದ್ದು, ಇಲ್ಲಿ ಸಂಸ್ಥೆಯ ವಾಹನ ಒಂದೇ ಸೇವೆ ನೀಡುತ್ತಿದೆ. ಕೆಲವಡೆ ಆಸ್ಪತ್ರೆಗೆ ಕಷ್ಟವಾಗುತ್ತಿದೆ. *ಶಾಸಕ ದಿನಕರ ಶೆಟ್ಟಿ ಇಂದ ಹೊನ್ನಾವರಕ್ಕೆ ಮುಂದುವರೆದ ಮಲತಾಯಿ ಧೋರಣಿ ಎನ್ನುವ ಆರೋಪ*ಹೊನ್ನಾವರದಲ್ಲಿ ಕುಮಟಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ಪಟ್ಟಣ ಹಾಗು ೯ ಗ್ರಾಮ ಪಂಚಾಯತಿ ಬರುತ್ತದೆ. ಈಗಾಗಲೇ ಕುಮಟಾದಲ್ಲಿ ವೈಯಕ್ತಿಕವಾಗಿ ಒಂದು ವಾಹನ ಕೋವಿಡ್ ಗೆ ಮೀಸಲಿಟ್ಟ ಶಾಸಕರು, ಹೊನ್ನಾವರಕ್ಕೆ ಇದುವರೆಗೂ ಮೀಸಲಿಡದೇ ಇರುವುದು ಮಲತಾಯಿ ಧೋರಣಿ ಎನ್ನುವ ಆರೋಪ ಇದೀಗ ಕೇಳಿಬರುತ್ತಿದೆ. ಕುಮಟಾ ಮತ್ತು ಹೊನ್ನಾವರ ನನ್ನ ಎರಡು ಕಣ್ಣಿದಂತೆ ಎಂದಿಗೂ ತಾರತಮ್ಯ ಮಾಡುವುದಿಲ್ಲ ಎಂದು ಹೇಳುವ ಶಾಸಕ ದಿನಕರ ಶೆಟ್ಟಿ ಒಂದು ಕಣ್ಣಿಗೆ ಬೆಣ್ಣಿ ಹಚ್ಚಿ ಇನ್ನೊಂದಕ್ಕೆ ಸುಣ್ಣ ಬಡಿದರೆ, ಎನ್ನುವ ಮಾತು ಕೇಳಿ ಬರುತ್ತಿದೆ. ವೇದಿಕೆಯಲ್ಲಿ ಸದಾ ರಾಜಕೀಯ ಲೆಕ್ಕಚಾರದಲ್ಲಿ ಭಾಷಣ ಮಾಡುವ ಶಾಸಕರು, ಕೋವಿಡನಲ್ಲಿಯೂ ರಾಜಕೀಯ ಲೆಕ್ಕಚಾರದ ಯೋಚನೆಗೆ ಮಂದಾಗಿಯಾದರೂ ತಾಲೂಕಿಗೆ ಸೇವೆ ನೀಡಬಹುದಿತ್ತು. ಕೆಲ ದಿನದ ಹಿಂದೆ ನಡೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಇವರ ಪಕ್ಷದ ಬೆಂಬಲಿಗರು ಹೆಚ್ಚಿನವರು ಅಧಿಕಾರ ಹಿಡಿದಿದ್ದು, ಪಟ್ಟಣದಲ್ಲಿಯೂ ಇವರದೇ ಪಕ್ಷ ಅಧಿಕಾರದಲ್ಲಿದೆ. ಆದರೂ ಈ ಸೌಲಭ್ಯ ನೀಡಲಿಲ್ಲ. ಅಥವಾ ಈ ಹಿಂದೆ ಸಚೀವರ ಮುಂದೆ ಸಾರ್ವಜನಿಕ ಸಭೆಯಲ್ಲಿ ಹೇಳಿದಂತೆ ಚುನಾವಣೆ ಸನಿಹದಲ್ಲಿ ನೀಡುವ ಯೋಚನೆ ಇದೆಯೋ ಗೊತ್ತಿಲ್ಲ. ಮುಂದೆ ಮೂರನೇ ಕೋವಿಡ್ ಅಲೆ ಬರಲಿದೆ ಎಂದು ವಿಜ್ಞಾನಿಗಳು ಹೆಳುತ್ತಿದ್ದಾರೆ. ಚುನಾವಣೆಯು ಆಗ ಸಮೀಪವಾಗಲಿದೆ. ಆಗ ನೀಡಿದರೆ ಸಾಕು. ಈಗ ಒಂದು ನೀಡಲಾಗಿದೆ ಎನ್ನುವ ಯೋಚನೆ ಇದೆಯೋ ಗೊತ್ತಿಲ್ಲ. ತಾಲೂಕಿಗೆ ಇವರು ಕೋವಿಡ್ ಸಮಯದಲ್ಲಿ ಕುಮಟಾಕ್ಕೆ ಕೊಟ್ಟು ಹೊನ್ನಾವರಕ್ಕೆ ವಾಹನ ಸೇವೆ ನೀಡಲು ಮೀನಾಮೇಷ ವ್ಯಕ್ತಪಡಿಸಿರುವುದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದರೆ, ಪಕ್ಷದ ಕಾರ್ಯಕರ್ತರು ಈ ಬಗ್ಗೆ ಉತ್ತರಿಸಲು ಹಿಂದೇಟು ಹಾಕುತ್ತಿದ್ದಾರೆ.
,……….ಕುಮಟಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ನಮ್ಮ ಮನೆಯಲ್ಲಿ ಒರ್ವರಿಗೆ ಸೊಂಕು ದೃಡವಾಯಿತು. ಹೋಮ್ ಐಸೊಲೇಶನ್ ಚಿಕಿತ್ಸೆ ಪಡೆಯುತ್ತಿದ್ದಾಗ, ಆರೊಗ್ಯದಲ್ಲಿ ಏರುಪೇರಾದಾಗ ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲು ಸರ್ಕಾರಿ ಅಂಬುಲೆನ್ಸ ಬೇರಡೆಗೆ ಹೋಗಿತ್ತು. ಆಗ ಹರಸಾಹಸ ಪಟ್ಟೆವು. ಯಾವುದೇ ಖಾಸಗಿ ವಾಹನವಿಲ್ಲ. ಭಟ್ಕಳ ಶಾಸಕರ ವಾಹನ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಎರಡು ಗಂಟೆಯ ನಂತರ ಖಾಸಗಿ ಅಂಬುಲೆನ್ಸ ಮೂಲಕ ಆಸ್ಪತ್ರೆಗೆ ತೆರಳಿದವು. ಶಾಸಕರು ಕಮಟಾದಂತೆ ತಾಲೂಕಿಗೆ ಒಂದು ವಾಹನ ಮೀಸಲಿಡಲಿ ಎನ್ನುವುದು ನನ್ನ ಆಗ್ರಹ…..ಕೋವಿಡ್ ಸೊಂಕಿಗೆ ಒಳಗಾದ ಮನೆಯವರು
Leave a Comment