ಹೊನ್ನಾವರ; ತಾಲೂಕಿನಲ್ಲಿ ತೊಕ್ತಿ ಚಂಡಮಾರುತದ ಅಬ್ಬರ ಜೋರಾಗಿದ್ದು, ಕರ್ಕಿ ಗ್ರಾಮದ ಪಾವಿನಕುರ್ವಾ ಹಾಗೂ ಕಾಸರಕೋಡ ಕಡಲತೀರ ಪ್ರದೇಶದಲ್ಲಿ ಸಮುದ್ರದ ನೀರು ಉಕ್ಕಿ ಮನೆಗಳಿಗೆ ನುಗ್ಗುವ ಆತಂಕ ಮನೆ ಮಾಡಿದೆ. ಕರ್ಕಿ ಗ್ರಾಮದ ಪಾವಿನಕುರ್ವಾ ಸಮೀಪ ಸಮುದ್ರ ತೀರದ ಭಾಗದಲ್ಲಿ ಪ್ರತಿಬಾರಿಗಮತಲೂ ಈ ಬಾರಿ ಇನ್ನಷ್ಟು ಆತಂಕ ಮೂಡಿದ್ದು ಮಧ್ಯಾಹ್ನದ ಸಮಯದಲ್ಲಿ ಮೂರಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, ತೀರ ಪ್ರದೇಶದ ೨೫ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಪ್ರತಿ ಬಾರಿ ಕಡಲಕೋರೆತ ಹಾಗೂ ಚಂಡಮಾರುತ ಅಪ್ಪಳಿಸುವಾಗ ಈ ಭಾಗದಲ್ಲಿ ಆತಂಕ ಎದುರಾಗುತ್ತಿದ್ದು, ಈ ಬಾರಿ ಕೊರೋನಾ ಭಯದ ನಡುವೆ ಕಡಲ ಅಬ್ಬರದಿಂದ ಕಡಲತೀರದ ನಿವಾಸಿಗಳ ಮನೆಗಳಿಗೆ ನೀರು ನುಗ್ಗುವ ಆತಂಕ ಮನೆ ಮಾಡಿದೆ. ಇನ್ನು ಎರಡು ದಿನಗಳ ಚಂಡಮಾರುತದ ಮುನ್ಸೂಚನೆಯ ಹಿನ್ನಲೆಯಲ್ಲಿ ತಾಲೂಕ ಆಡಳಿತ ಸುರಕ್ಷೀತ ಸ್ಥಳಕ್ಕೆ ಶಿಪ್ಟ ಮಾಡಲು ಮುಂದಾಗಿದೆ. ಪಾವಿನಕುರ್ವಾ ಭಾಗಕ್ಕೆ ತಹಶೀಲ್ದಾರ ವಿವೇಕ ಶೇಣ್ವಿ, ಸಿಪಿಐ ಶ್ರೀಧರ ಎಸ್.ಆರ್. ಪಿಎಸೈ ಶಶಿಕುಮಾರ, ಹಾಗೂ ಕಂದಾಯ ಇಲಾಖೆಯ ವಿನಯ ಪಂಡಿತ್ ಪಿಡಿಓ ಕಿರಣಕುಮಾರ್ ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ಪಾವಿನಕುರ್ವಾದಲ್ಲಿ ಆಶ್ರಯಕೇಂದ್ರವನ್ನು ಆರಂಭಿಸಲಾಗಿದೆ. ಈಗಾಗಲೇ ೫೦ಕ್ಕೂ ಅಧಿಕ ತೀರ ಪ್ರದೇಶದ ನಿವಾಸಿಗಳನ್ನು ಕೇಂದ್ರಕ್ಕೆ ಕರೆತರಲಾಗಿದೆ. ಕೊರೋನಾ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ ಸೇರಿದಂತೆ ಕೊರೋನಾ ಸುರಕ್ಷೀತ ಕ್ರಮವನ್ನು ಪಾಲನೆಗಾಗಿ ಆರೊಗ್ಯ ಅಧಿಕಾರಿಗಳು ಹಾಗೂ ಪಂಚಾಯತಿ ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ. ಕಾಸರಕೋಡ ಟೊಂಕಾ ಅಪ್ಸರಕೊಂಡ ಭಾಗದಲ್ಲಿ ಅಲೆಗಳ ಅಬ್ಬರ ಹೆಚ್ಚಳವಾಗುತ್ತಿದ್ದು ಅಧಿಕಾರಿಗಳು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.
Leave a Comment