ಹೊನ್ನಾವರ; ಮಳೆಗಾಲ ಸಮೀಪಿಸುತ್ತಿರುವುದರಿಂದಮತ್ತು ಕೋವಿಡ್ ನಿರ್ವಹಣೆ, ಚಂಡಮಾರುತ ನಿರ್ವಹಣೆಯಕೆಲಸದ ಭಾರ ತಾಲೂಕಾ ದಂಡಾಧಿಕಾರಿಗಳ ಕಾರ್ಯಾಲಯದಮೇಲೆ ಇರುವುದರಿಂದ ತುರ್ತಾಗಿ ನೂತನ ಮಿನಿವಿಧಾನಸೌಧಕಟ್ಟಡಕ್ಕೆ ತಹಶೀಲ್ದಾರ ಕಚೇರಿಯನ್ನು ಸೋಮವಾರ ಸ್ಥಳಾಂತರಿಸಲಾಯಿತು.
ಧಾರ್ಮಿಕ ಕಾರ್ಯಕ್ರಮ ಗಣಹೋಮದ ಮೂಲಕ ಕಚೇರಿಯನ್ನು ಆರಂಭಿಸಲಾಯಿತು. ಮೊದಲಿನ ಹಂಗಾಮಿ ಕಟ್ಟಡಸೋರುತ್ತಿರುದರಿಂದ ಮಳೆಗಾಲದ ಪೂರ್ವ ಸ್ಥಳಾಂತರಿಸಲೇಬೇಕಾದ ಅನಿವಾರ್ಯತೆ ಇರುದರಿಂದ ಸಚೀವರ ಹಾಗೂ ಇಲಾಖೆಯ ಅಧಿಕಾರಿಗಳ ಸೂಚನೆ ಮೇರೆಗೆ ಕಚೇರಿಯನ್ನು ಸ್ಥಳಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಹಾಜರಿದ್ದಶಾಸಕ ದಿನಕರ ಶೆಟ್ಟಿ ಮಾತನಾಡಿ ಕಂದಾಯ ಸಚಿವ ಹಾಗೂ ಉಸ್ತುವಾರಿಸಚಿವರ ಸಲಹೆಯಂತೆ ತುರ್ತಾಗಿ ತಾಲೂಕಾ ಕಛೇರಿಗೆ ಸ್ಥಳಾಂತರ ಮಾಡಲಾಗಿದೆ. ಕೋವಿಡ್ಕಾಲ ಮುಗಿದ ಮೇಲೆ ಸಚಿವರು ಉದ್ಘಾಟಿಸಲಿದ್ದಾರೆ. ೪ ಕೋಟಿರೂಪಾಯಿ ವೆಚ್ಚದ ಈ ಕಟ್ಟಡಕ್ಕೆ ೧.೫ ಕೋಟಿ ರೂಪಾಯಿ ನಾನುಮಂಜೂರು ಮಾಡಿಸಿದ್ದೇನೆ. ಒಟ್ಟಿಗೆ ಈ ಕಟ್ಟಡಕ್ಕೆ ೬.೫ಕೋಟಿರೂಪಾಯಿ ಖರ್ಚಾಗಿದೆ. ಇತರ ನಾಲ್ಕು ಸರ್ಕಾರಿ ಕಛೇರಿಗಳು ಇಲ್ಲಿಬರುವಂತೆ ಮಾಡಲು ಮಹಡಿ ನಿರ್ಮಾಣಕ್ಕೆ ಇನ್ನೂ ೫ಕೋಟಿರೂಪಾಯಿಗಳ ಪ್ರಸ್ತಾವನೆ ಕಳಿಸಲಾಗಿದೆ ಎಂದರು.ಕೋವಿಡ್ ಕುರಿತು ತಾಲೂಕಾಸ್ಪತ್ರೆಗೆ ಎಲ್ಲ ಸಹಕಾರ ನೀಡಿದ್ದು ಔಷಧ, ಆಕ್ಸಿಜನ್ಯಾವುದಕ್ಕೂ ತೊಂದರೆಯಾಗದಂತೆ ಕಾಳಜಿ ವಹಿಸಲಾಗಿದೆ.ವೈದ್ಯರು ಮತ್ತು ಸಿಬ್ಬಂದಿಗಳು ಉತ್ತಮಕಾರ್ಯನಿರ್ವಹಿಸುತ್ತಿದ್ದಾರೆ. ಜನ ಜಾಗೃತರಾಗಿ ಕಾಳಜಿ ವಹಿಸಿಕೊರೊನಾದಿಂದ ದೂರವಿರಬೇಕು ಎಂದು ಹೇಳಿದರು.ತೌಕ್ತೇ ಚಂಡಮಾರುತದ ಹಾನಿಯ ಕುರಿತುತಾಲೂಕಾಡಳಿತ ಸಮಗ್ರ ಸಮೀಕ್ಷೆ ನಡೆಸಿದ್ದುಹಾನಿಗೊಳಗಾದವರಿಗೆ ಸೂಕ್ತ ಪರಿಹಾರದ ವ್ಯವಸ್ಥೆಮಾಡಲಾಗುತ್ತಿದೆ ಎಂದರು.
ಭಟ್ಕಳ ಉಪವಿಭಾಗಾಧಿಕಾರಿ ತಹಶೀಲ್ದಾರ ವಿವೇಕ ಶೇಣ್ವಿ, ಲೋಕೋಪಯೋಗಿಇಲಾಖೆಯ ಅಧಿಕಾರಿ ಯೋಗಾನಂದ, ಪ.ಪಂಚಾಯತಅಧ್ಯಕ್ಷ ಶಿವರಾಜ ಮೇಸ್ತ, ಪ.ಪಂ. ಮುಖ್ಯಾಧಿಕಾರಿ ಪ್ರವೀಣಕುಮಾರ, ಸಿಪಿಐ ಶ್ರೀಧರ ಎಸ್.ಆರ್, ಪಿಎಸ್ಐ ಶಶಿಕುಮಾರ ಎಂ.ಎಸ್. ಹೆಗಡೆ ಕಣ್ಣಿ ಮೊದಲಾದವರುಉಪಸ್ಥಿತರಿದ್ದರು.
Leave a Comment