• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕುಗ್ರಾಮಗಳ ಹೃದಯರೋಗಿಗಳನ್ನು ಹುಡುಕಿಹೊರಟ ಡಾ. ಕಾಮತರ ಸಿಎಡಿ

May 21, 2021 by Vishwanath Shetty Leave a Comment

ಹೊನ್ನಾವರ : 23 ಜಿಲ್ಲೆಗಳ 35 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ, ಕೆಲವು ಖಾಸಗಿ ವೈದ್ಯರಿಗೆ, ಜನೌಷಧಿ ಕೇಂದ್ರಗಳಿಗೆ ಉಚಿತವಾಗಿ ಇಸಿಜಿ ಉಪಕರಣ ಕೊಟ್ಟು ಅವರಿಂದ ಇಸಿಜಿ ವರದಿಯನ್ನು ವಾಟ್ಸಾಪ್‍ನಲ್ಲಿ ತರಿಸಿಕೊಂಡು ತಕ್ಷಣ ಸೂಕ್ತ ಸಲಹೆ ನೀಡುವ ಡಾ. ಪದ್ಮನಾಭ ಕಾಮತ್ ಸಂಚಾಲಕತ್ವದಲ್ಲಿರುವ ಮನೆಬಾಗಿಲಿಗೆ ಹೃದಯ ವೈದ್ಯರು (ಕಾರ್ಡಿಯಾಕ್ ಎಟ್ ಡೋರ್ ಸ್ಟೆಪ್) ಸಂಘಟನೆ ಈಗ ವೈದ್ಯರುಗಳ ಮತ್ತು ಆಸ್ಪತ್ರೆಗಳ ಸಂಪರ್ಕವಿಲ್ಲದ ಕುಗ್ರಾಮಗಳ ಜನರಿಗೆ ಹೃದಯ ಸಲಹೆ ನೀಡಲು ಹೊರಟಿದೆ. ಉತ್ತರ ಕನ್ನಡ ಜಿಲ್ಲೆಯ 10 ಕುಗ್ರಾಮಗಳ ಸಹಿತ ಈ ಸಾಲಿನಲ್ಲಿ 50ಕುಗ್ರಾಮಗಳ ಜನರಿಗೆ ಉಚಿತ ಹೃದಯ ಚಿಕಿತ್ಸೆಯ ಸಲಹೆ ನೀಡಲು ಯೋಚಿಸಿದ್ದೇನೆ ಎಂದು ಡಾ. ಪದ್ಮನಾಭ ಕಾಮತ್ ಹೇಳಿದ್ದಾರೆ.

20 Honavar 01 1


ಕೋವಿಡ್ ಎರಡನೇ ಅಲೆ ಆರಂಭವಾದಾಗ ಅದರಲ್ಲಿ ತೇಲಿಬಂದ ಈ ವಿಚಾರಗಳು ಈ ಯೋಜನೆಗೆ ಚಾಲನೆ ನೀಡಿವೆ. ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಕುಗ್ರಾಮ ಸಾನಕಟ್ಟುವಿನಲ್ಲಿ 500-600 ಜನಸಂಖ್ಯೆಯಿದೆ. ಅಲ್ಲಿಂದ 6ಕೀಮೀ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲ, ವೈದ್ಯರೂ ಇಲ್ಲ. ಆ ಊರಿನಲ್ಲಿ ಕೆಲವೇ ತಿಂಗಳಲ್ಲಿ 4ಮಂದಿ ಸಕಾಲದಲ್ಲಿ ವೈದ್ಯಕೀಯ ಸಲಹೆ ಸಿಗದೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಅಲ್ಲಿಯ ಗ್ರಾಮ ಪಂಚಾಯತದ ಮಾಜಿ ಸದಸ್ಯರೊಬ್ಬರು ಕಾಮತರ ಸಂಪರ್ಕಕ್ಕೆ ಬಂದಾಗ ದೇಶದಲ್ಲಿ ಪ್ರಥಮ ಬಾರಿ ಹೊಸ ವಿಚಾರವನ್ನು ಕಾರ್ಯರೂಪಕ್ಕೆ ತರಲಾಯಿತು. ಆ ಗ್ರಾಮದಲ್ಲಿರುವ ಅಂಗನವಾಡಿಯ ಇಬ್ಬರು ಶಿಕ್ಷಕಿಯರಿಗೆ ಮತ್ತು ಇಬ್ಬರು ಪಂಚಾಯತ ಸದಸ್ಯರಿಗೆ ಇಸಿಜಿ ಅಳೆಯುವ ಕ್ರಮವನ್ನು ಕಲಿಸಿಕೊಟ್ಟು ಉಚಿತವಾಗಿ ಇಸಿಜಿ ಉಪಕರಣವನ್ನು ಸಿಎಡಿ ಒದಗಿಸಿದ ಕಾರಣ ಅಲ್ಲಿಂದ ಹಲವಾರು ಇಸಿಜಿಗಳು ಬರತೊಡಗಿದವು. ಈ ಯಶಸ್ಸಿನ ಕಾರಣ ಇನ್ನೂ ಮೂರು ಕಡೆ ಇಂಥಹದೇ ಹಳ್ಳಿಯಲ್ಲಿ ಇಸಿಜಿ ಉಪಕರಣವನ್ನು ನೀಡಲಾಯಿತು.
ಭಾರತದ ಹಲವು ಹಳ್ಳಿಗಳ ನಾಲ್ಕಾರು ಕೀಮೀ ವ್ಯಾಪ್ತಿಯಲ್ಲಿ ಈಗಲೂ ವೈದ್ಯರಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರವೈ ಇಲ್ಲ, ಇದ್ದರೂ ಅಲ್ಲಿ ನುರಿತ ವೈದ್ಯರಿಲ್ಲ, ವಾಹನ ಸಂಪರ್ಕವೂ ಇಲ್ಲಪೀಗ ಹೊಸದಾಗಿ ಆಸ್ಪತ್ರೆ ಆರಂಭಿಸುವ ಪರಿಸ್ಥಿತಿ ಎಲ್ಲೂ ಇಲ್ಲ, ಆರಮಭಿಸಿದರೂ ವೈದ್ಯರು ಸಿಗುವುದಿಲ್ಲ. ಇಂಥಹ ಪರಿಸ್ಥಿತಿಯಲ್ಲಿ ಹೃದಯಾಘಾತದ ಲಕ್ಷಣ ಕಂಡುಬಂದರೆ ನಾಲ್ಕಾರು ಕೀಮೀ ದೂರ ಹೋಗುವಷ್ಟರಲ್ಲಿ ಆತ ಮೃತಪಟ್ಟಿರುತ್ತಾನೆ. ಈ ಕಹಿ ಸತ್ಯವನ್ನು ಅಧ್ಯಯನ ಮಾಡಿದ ಡಾ. ಕಾಮತ್ ಇಂಥಹ ಊರಿನಲ್ಲಿ ಗ್ರಾಮ ಪಂಚಾಯತ ಮತ್ತು ಅಂಗನವಾಡಿ ಇರುವುದನ್ನು ತಿಳಿದು ಇಂಥಹ ಊರುಗಳಲ್ಲಿ ಇಸಿಜಿ ಉಪಕರಣ ನೀಡಿ, ತರಬೇತಿ ನೀಡಿ ವಾಟ್ಸಾಪ್ ಮೂಲಕ ವರದಿ ತರಿಸಿಕೊಂಡು ಸಲಹೆ ನೀಡಲು ತೀರ್ಮಾನಿಸಿದ್ದೇನೆ. ಯಾವ ಪಂಚಾಯತಕ್ಕೆ ಇದರ ಅಗತ್ಯವಿದೆ ಎಂಬುದನ್ನು ಅವರೇ ಮುಂದೆ ಬಂದು ತಿಳಿಸಬೇಕು ಮತ್ತು ಅಂಗನವಾಡಿಯ ಶಿಕ್ಷಕಿ ಅಥವಾ ಸಹಾಯಕಿಯ ನೆರವಿನಿಂದ ಹೃದಯಸಮಸ್ಯೆ ಉಂಟಾದವರು ಬಂದಕೂಡಲೇ ಇಸಿಜಿ ತೆಗೆದು ಕಳಿಸುವ ವ್ಯವಸ್ಥೆ ಮಾಡಲು ಒಪ್ಪಿದರೆ ಅವರಿಗೆ ಉಪಕರಣ ಒದಗಿಸುವುದಾಗಿ ಡಾ. ಕಾಮತ್ ಹೇಳಿದ್ದಾರೆ.

20 Honavar 02 1


………………………….
ಡಾ. ಪದ್ಮನಾಭ ಕಾಮತ್
ಮಂಗಳೂರು ಕೆಎಂಸಿಯಲ್ಲಿ ಹೃದಯ ವಿಭಾಗದ ಮುಖ್ಯಸ್ಥರಾಗಿರುವ ಡಾ. ಪದ್ಮನಾಭ ಕಾಮತ್ ಯಕ್ಷಗಾನ ಪ್ರಿಯರು. ಆಟಕ್ಕೆ ಹೋದಾಗ ಅಪರಾತ್ರಿಯಲ್ಲಿ ಹೃದಯ ಬೇನೆ ಬಂದು ಸೌಲಭ್ಯಗಳಿಲ್ಲದೇ ಒದ್ದಾಡಿ ಆಸ್ಪತ್ರೆಗೆ ತಲುಪಲು ವಿಳಂಬವಾಗಿ ಪ್ರಾಣಬಿಡುವುದನ್ನು ಕಣ್ಣಾರೆ ಕಂಡು ಇದಕ್ಕೆ ಪರಿಹಾರ ರೂಪವಾಗಿ ಕಾಮತರು ರೂಪಿಸಿದ ಕಾರ್ಡಿಯಾಕ್ ಎಟ್ ಡೋರ್ ಸ್ಟೆಪ್ ಜನಪ್ರಿಯವಾಗಿದೆ. ಯಾವ ಟೀಕೆ, ಟಿಪ್ಪಣೆಗಳಿಗೂ ತಲೆಕೆಡಿಸದೆ ಮುಂದುವರಿದ ಡಾ. ಕಾಮತ್ ಅವರ ಸೇವೆಯನ್ನು ಇತ್ತೀಚೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮುಕ್ತಕಂಠದಿಂದ ಪ್ರಶಂಸಿರುವುದನ್ನು ಇಲ್ಲಿ ಸ್ಮರಿಸಬಹುದು. ಇದರಿಂದ ಸಂತೋಷಗೊಂಡ ಡಾ. ಕಾಮತ್ ತಮ್ಮ ನಿತ್ಯದ ರೋಗಿಗಳ ತಪಾಸಣೆ, ಕ್ಯಾಥ್ ಲ್ಯಾಬ್ ಕೆಲಸಗಳ ಮಧ್ಯೆಯೂ ಸಹ ಮೊಬೈಲನ್ನು ಚಾಲು ಇಟ್ಟುಕೊಂಡು ಬರುವ ಇಸಿಜಿ ವರದಿಗಳಿಗೆ ಗಂಭೀರವಾಗಿದೆ ಅಥವಾ ಇಲ್ಲ, ತಕ್ಷಣ ಆಸ್ಪತ್ರೆಗಳಿಗೆ ಹೋಗಬೇಕೋ-ಬೇಡವೋ, ವೈದ್ಯರು ಕಳಿಸಿದ ಇಸಿಜಿಯಾಗಿದ್ದರೆ ತಕ್ಷಣ ಕೆಲವು ಔಷಧಗಳನ್ನು ಸೂಚಿಸುತ್ತಾ ಬಂದಿರುವುದರಿಂದ ಈ ಕಾರ್ಯವನ್ನು ಕೋವಿಡ್ ಮೊದಲನೇ ಅಲೆಯಲ್ಲಿಯೂ ಎಲ್ಲ ನಿರ್ಬಂಧಗಳಿದ್ದರೂ ಮುಂದುವರಿಸಿ ರೋಗಿಗಳನ್ನು ತಲುಪಿದ್ದಲ್ಲದೇ ಎರಡನೇ ಅಲೆ ತಂದ ಹೊಸ ವಿಚಾರದಿಂದ ಕುಗ್ರಾಮಗಳಿಗೆ ಹೊರಟಿದ್ದಾರೆ. ಸಿಎಡಿ ಈವರೆಗೆ ನೂರಾರು ಅಮೂಲ್ಯ ಜೀವಗಳನ್ನು ಉಳಿಸಿದೆ. ಉತ್ತರ ಕನ್ನಡ ಜಿಲ್ಲೆಯ ಯಾವುದೇ ಪಂಚಾಯತಕ್ಕೆ ಈ ನೆರವು ಅಗತ್ಯವಿದ್ದರೆ ಸಂಪರ್ಕಿಸಬಹುದು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: ಉಚಿತ ಹೃದಯ ಚಿಕಿತ್ಸೆ, ಕಾರ್ಡಿಯಾಕ್ ಎಟ್ ಡೋರ್ ಸ್ಟೆಪ್, ಡೋರ್ ಸ್ಟೆಪ್, ಪದ್ಮನಾಭ ಕಾಮತ್ ಸಂಚಾಲಕತ್ವ, ಮನೆಬಾಗಿಲಿಗೆ ಹೃದಯ ವೈದ್ಯರು, ಸೂಕ್ತ ಸಲಹೆ ನೀಡುವ, ಹೃದಯಸಮಸ್ಯೆ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...