ಹೊನ್ನಾವರ: ತೀವ್ರ ಅನಾರೋಗ್ಯ ಮತ್ತು ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದ ತಾಲೂಕಿನ ಹಳದೀಪುರದ ವೃದ್ಧೆ ಹಾಗೂ ತುಂಬು ಗರ್ಭಿಣಿಯೊಬ್ಬರಿಗೆ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರು ತುರ್ತಾಗಿ ಆಮ್ಲಜನಕ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆಯುವ ಮೂಲಕ ಜನರ ವಿಶ್ವಾಸಕ್ಕೆ ಕಾರಣರಾಗಿದ್ದಾರೆ.

ಹಳದೀಪುರದ 74 ವರ್ಷದ ಅಮೀನಾ ಯಾಕೂಬ್ ಖಾನ್ ಇವರು ಕೊರೋನ ಸೋಂಕಿಗೆ ಒಳಗಾಗಿ ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದರು. ಹಳದೀಪುರ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರಾದ ಮಮತಾ ವಿನಾಯಕ ಶೇಟ್ ಅವರು ಸೋಂಕಿತರ ಪರಿಸ್ಥಿತಿಯನ್ನು ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿಯವರಿಗೆ ತಿಳಿಸಿದ್ದಾರೆ.ವೈದ್ಯರು ನೀಡಿದ ದಾಖಲೆಗಳನ್ನು ಪರಿಶೀಲಿಸಿ ತಕ್ಷಣ 1 ಜಂಬೋ ಆಕ್ಸಿಜನ್ ಸಿಲಿಂಡರ್ ಅನ್ನು ಮಾಜಿ ಶಾಸಕಿಯವರು ಸೋಂಕಿತೆಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
*ಗರ್ಭಿಣಿಗೆ ಆಮ್ಲಜನಕ ವ್ಯವಸ್ಥೆ:*ಇನ್ನು ಹೊನ್ನಾವರ ಪ್ರಭಾತನಗರದ ನಿವಾಸಿಯಾಗಿರುವ ವಿಜಯಲಕ್ಷ್ಮೀ ದಿಲೀಪ್ ಮೇಸ್ತ ಅವರು 8 ತಿಂಗಳ ಗರ್ಭಿಣಿಯಾಗಿದ್ದು, ಕೊರೋನ ಸೋಂಕಿಗೆ ಒಳಗಾಗಿ ಅಮ್ಲಜನದ ಕೊರತೆಯಿಂದ ಬಳಲುತ್ತಿದ್ದರು. ಈ ವೇಳೆ ಮುಖಂಡರಾದ ಸತ್ಯ ಜಾವಗಲ್ ಹಾಗೂ ಸಂಗಡಿಗರು ಕುಮಟಾ-ಹೊನ್ನಾವರ ಕ್ಷೇತ್ರದ ಮಾಜಿ ಶಾಸಕಿ ಶಾರದಾ ಶೆಟ್ಟಿಯವರ ಬಳಿ ಮನವಿ ಸೋಂಕಿತೆಗೆ ಆಮ್ಲಜನಕದ ಸಿಲಿಂಡರ್ ಪೂರೈಸುವಂತೆ ಕೇಳಿಕೊಂಡಾಗ, ವೈದ್ಯರು ನೀಡಿರುವ ಸೂಕ್ತ ದಾಖಲೆಗಳನ್ನು ಪರಿಶೀಲಿಸಿ 1 ಜಂಬೋ ಆಮ್ಲಜನಕದ ಸಿಲಿಂಡರ್ ಅನ್ನು ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರು ಸೋಂಕಿತರಿಗೆ ನೀಡುವುದರೊಂದಿಗೆ ತನ್ನ ಕ್ಷೇತ್ರ ವ್ಯಾಪ್ತಿಯ ಜನರ ಮೇಲಿರುವ ಕಾಳಜಿ, ಪ್ರೀತಿ ವಿಶ್ವಾಸ ಇತರ ರಾಜಕಾರಣಿಗಳಿಗೂ ಮಾದರಿಯಾಗಿದೆ.
Leave a Comment