ಹೊನ್ನಾವರ: ತಾಲೂಕ ಬಿಜೆಪಿ ಮಂಡಲದ ಕಾರ್ಯದರ್ಶಿಯಾಗಿರುವ ಸ್ಮೀತಾ ಭಟ್ ಕೊರೋನಾ ಸಮಯದಲ್ಲಿ ಗ್ರಾಮೀಣ ಭಾಗದವರಿಗೆ ನೆರವಾಗುತ್ತಿದ್ದಾರೆ.
ಕಳೆದ ೧೫ ವರ್ಷಗಳಿಂದ ಹೈನುಗಾರಿಕೆ ನಡೆಸುತ್ತಾ ಬಂದಿರುವ ಇವರು ಪ್ರಸುತ್ತ ವರ್ಷ ಕೋವಿಡ್ ಹಿನ್ನಲೆಯಲ್ಲಿ ಸರ್ಕಾರ ಕೋವಿಡ್ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿ ಮಾಡಿರುದರಿಂದ ಗ್ರಾಮೀಣ ಭಾಗದವರು ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಚಿಕ್ಕನಕೋಡ್ ಗ್ರಾಮದ ಗುಂಡಬಾಳ, ಕೊಟೆಬೈಲ್ ಗ್ರಾಮದ ಹಲವು ಕುಟುಂಬಗಳಿಗೆ ದಿನಸಿ ಹಾಗೂ ತರಕಾರಿ ನೀಡುವ ಮೂಲಕ ಸ್ಮೀತಾ ಭಟ್ ನೆರವಾಗಿದ್ದಾರೆ.ಈ ಬಗ್ಗೆ ಅನಿಸಿಕೆ ಹಂಚಿಕೊಂಡ ಅವರು ನನ್ನ ಕೈಲಾದ ರೀತಿಯಲ್ಲಿ ನನ್ನೂರಿನ ಜನರಿಗೆ ಅನೂಕೂಲ ಮಾಡಲು ಕಿಟ್ ವಿತರಿಸಿದ್ದೇನೆ. ಲಾಕ್ ಡೌನ್ ಇರುದರಿಂದ ಆರ್ಥಿಕ ಸಂಕಷ್ಟ ಒಂದಡೆಯಾದರೆ, ಅಂಗಡಿ ಸಮಯ ನಿಗಧಿ ಇರುದರಿಂದ ಆಗುತ್ತಿರುವ ಸಮಸ್ಯೆ ಮನಗಂಡು ನನ್ನ ಕೈಲಾದ ರೀತಿಯಲ್ಲಿ ನೆರವಾಗಿದ್ದೇನೆ. ನನ್ನ ಕುಟುಂಬದವರ ಸಹಕಾರದಿಂದ ಈ ಕಾರ್ಯ ಮಾಡುತ್ತಿದ್ದು, ನನ್ನಂತೆ ಇತರೆ ಗ್ರಾಮದವರು ಈ ರೀತಿ ಮಾಡುವ ಮೂಲಕ ಸಂಕಷ್ಟದಲ್ಲಿದ್ದವರಿಗೆ ನೆರವಾಗುವಂತೆ ಮನವಿ ಮಾಡಿದ್ದಾರೆ.
Leave a Comment