ಶಾಸಕರ ಪ್ರದೇಶಾಭಿವೃದ್ಧಿ ನಿಗಮದಿಂದ ಮಂಜೂರಾದ ಅಂಬುಲೆನ್ಸ ಚಾಲನೆ ನೀಡಿದ ಶಾಸಕ ಸುನೀಲ ನಾಯ್ಕ.ಹೊನ್ನಾವರ; ೨೦ ಲಕ್ಷ ವೆಚ್ಚದಲ್ಲಿ ಶಾಸಕರ ಪ್ರವೇಶಾಭಿವೃದ್ದಿ ನಿಗಮದಿಂದ ಕ್ಷೇತ್ರಕ್ಕೆ ಎರಡು ಅಂಬುಲೆನ್ಸ ಬಿಡುಗಡೆಯಾಗಿದ್ದು, ಹೊನ್ನಾವರ ತಾಲೂಕಿಗೆ ಒಂದು ಅಂಬುಲೆನ್ಸ ಮಂಜೂರಾಗಿತ್ತು.

ಮಂಗಳವಾರ ಇಡಗುಂಜಿ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಅಂಬುಲೆನ್ಸ ವಾಹನ ಚಲಾಯಿಸುವ ಮೂಲಕ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು.ನಂತರ ಮಾತನಾಡಿ ಕ್ಷೇತ್ರಕ್ಕೆ ೪೦ ಲಕ್ಷ ವೆಚ್ಚದಲ್ಲಿ ಎರಡು ಅಂಬುಲೆನ್ಸ ಬಂದಿದ್ದು, ಮುಂದಿನ ದಿನದಲ್ಲಿ ಮಂಕಿ ಹಾಗೂ ಶಿರಾಲಿಗೆ ಪ್ರತೈಕ ಅಂಬುಲೆನ್ಸ ಆಗಮಿಸಲಿದೆ. ಕಳೆದ ೨೦ ದಿನದ ಹಿಂದೆ ಕೋವಿಡ್ ಸೊಂಕಿತರಿಗಾಗಿ ಎರಡು ತಾಲೂಕಿಗೆ ಒಂದು ಆಕ್ಸಿಜನ್ ಸಹಿತ ವಾಹನವನ್ನು ವೈಯಕ್ತಿಕವಾಗಿ ನೀಡಲಾಗಿದೆ.
ತಾಲೂಕ ಆಸ್ಪತ್ರೆಯ ಬೇಡಿಕೆಗೆ ತಕ್ಕಂತೆ ಸಕಲ ರೀತಿಯಲ್ಲಿ ಸೌಲಭ್ಯ ನೀಡಲು ಉತ್ಸುಕನಾಗಿರುದಾಗಿ ಭರವಸೆ ನೀಡಿದರು. ಸಾರ್ವಜನಿಕರು ಆರೊಗ್ಯದಲ್ಲಿ ಏರುಪೇರು ಉಂಟಾದಾಗ ಮನೆಯಲ್ಲಿರದೇ ಆಸ್ಪತ್ರೆಗೆ ಆಗಮಿಸಿ ವೈದ್ಯರ ಸಲಹೆ ಪಡೆಯುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಜೇಶ ಕಿಣಿ, ಗಣಪತಿ ನಾಯ್ಕ ಬಿಟಿ, ಕೇಶವ ನಾಯ್ಕ ಬಳ್ಕೂರ,ಗಣಪತಿ ಗೌಡ ಚಿತ್ತಾರ,ಶ್ರೀಧರ ನಾಯ್ಕ ಮಂಕಿ, ಅಣ್ಣಪ್ಪ ನಾಯ್ಕ, ರಾಧಾ ನಾಯ್ಕ ಕುಳಿಮನೆ, ಸುಬ್ರಾಯ ಹೆಗಡೆ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಜರಿದ್ದರು.
Leave a Comment