ಕರ್ಕಿಯ ಶಾಲೆಯ ಆವರಣದಲ್ಲಿ ಪೂರ್ವ ವಿದ್ಯಾರ್ಥಿಗಳು ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದ ಹಿರಿಯ ಪ್ರಾರ್ಥಮಿಕ ಶಾಲೆಯ ಆವರಣದಲ್ಲಿ ಜಂಬೆ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಪೂರ್ವ ವಿದ್ಯಾರ್ಥಿಗಳು ಆಚರಿಸಿದರು.
ಅಲ್ಲದೇ ಗ್ರಾಮದ ವಿವಿಧ ಮನೆಗಳಿಗೆ ಹಣ್ಣಿನ ಗಿಡ ಉಚಿತವಾಗಿ ನೀಡಿ ಪರಿಸರ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಶಾಲೆಯ ಪೂರ್ವ ವಿದ್ಯಾರ್ಥಿಗಳು ಹಾಗೂ ತಾಲೂಕ ಪಂಚಾಯತ ಮಾಜಿ ಸದಸ್ಯ ಅಶೋಕ ನಾಯ್ಕ ಹಾಗೂ ಶಾಲೆಯ ಎಸ್.ಡಿ. ಎಂ.ಸಿ ಮಾಜಿ ಅಧ್ಯಕ್ಷ ಜಯಂತ ಮೇಸ್ತ ಹಾಗೂ ಯುವಕರಾದ ರವಿ ಮುಕ್ರಿ ವಿನೋದ ಮುಕ್ರಿ, ವಿನೀತ ಮುಕ್ರಿ ಮತ್ತು ಸುದೀಪ ಮುಕ್ರಿ ಉಪಸ್ಥಿತರಿದ್ದರು.
Leave a Comment