ಹೊನ್ನಾವರ; ಕಳೆದ ಎರಡು ದಿನದಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಗೆ ಇಡಗುಂಜಿ ಗ್ರಾಮದ ಮೊಳ್ಕೋಡ್ ಸೀತು ವಿಠ್ಠಲ್ ನಾಯ್ಕ ಇವರ ಮನೆಯ ಮೇಲ್ಚಾವಣೆ ಕುಸಿದು ಬಿದ್ದು ಮನೆಗೆ ಹಾನಿ ಸಂಭವಿಸಿದೆ. ಅದೃಷ್ಟವಶಾತ್ ಮನೆಯಲ್ಲಿ ವಾಸವಿದ್ದವರು ಪ್ರಾಣಾಪಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿ ಸುನೀಲ ಭೇಟಿ ನೀಡಿ ಪರೀಶೀಲನೆ ನಡೆಸಿ ಪಂಚನಾಮೆ ನಡೆಸಿದ್ದಾರೆ. ಗ್ರಾ.ಪಂ.ಅಧ್ಯಕ್ಷರು ಹಾಗೂ ಸದಸ್ಯರು ಭೇಟಿ ನೀಡಿದ್ದು ಶಾಸಕ ಸುನೀಲ ನಾಯ್ಕ ಇವರಿಗೂ ಹಾನಿ ಬಗ್ಗೆ ವರದಿ ನೀಡಿದ್ದು ಸರ್ಕಾರದಿಂದ ಪರಿಹಾರ ತುರ್ತಾಗಿ ಒದಗಿಸುವಂತೆ ಮನವಿ ಮಾಡಿದ್ದಾರೆ.
Leave a Comment