ಯಲ್ಲಾಪುರ ತಾಲೂಕಿನ ಜೀವ ವೈವಿಧ್ಯ ಸೂಕ್ಷö್ಮ ಪ್ರದೇಶವಾದ ದೇಹಳ್ಳಿ ಮತ್ತು ಅನಗೋಡ ಗ್ರಾಮ ಪಂಚಾಯಿತ ವ್ಯಾಪ್ತಿಯಲ್ಲಿ ವ್ಯಾಪಕವಾದ ಅರಣ್ಯನಾಶ ಮತ್ತು ಖನಿಜಾಂಶಯುಕ್ತ ಮಣ್ಣು ಸಾಗಣಿಕೆಯಿಂದ ಸುಮಾರು ೧ ಕೋಟಿ ರೂಪಾಯಿಯಷ್ಟು ಅರಣ್ಯ ಪರಿಸರ ಮೌಲ್ಯ ನಾಶವಾಗಿದ್ದು, ಅರಣ್ಯ ಕಾನೂನನ್ನು ಅರಣ್ಯಾಧಿಕಾರಿಗಳೇ ಉಲ್ಲಂಘಿಸಿ ಪರಿಸರ ನಾಶಕ್ಕೆ ಕಾರಣವಾಗಿದ್ದು ಖಂಡನಾರ್ಹ. ಅಂತಹ ಅರಣ್ಯಾಧಿಕಾರಿ ಮೇಲೆ ತಕ್ಷಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೇ ಉಗ್ರ ಹೋರಾಟ ಮಾಡಲಾಗುವದು. ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
Leave a Comment