ಹೊನ್ನಾವರ; ಕೊರೋನಾರ್ಭಟದಿಂದ ರಾಜ್ಯ ಸರ್ಕಾರ ಕೊರೋನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿ ಮಾಡಿದ ಬಳಿಕ ಸಾರಿಗೆ ಸಂಚಾರ ಸಂಪೂರ್ಣ ಸ್ಥಬ್ದವಾಗಿತ್ತು. ಅದಕ್ಕೂ ಮೊದಲು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಏಪ್ರಿಲ್ ೮ರಂದು ಸ್ಥಗಿತಗೊಂಡಿದ್ದ ಬಸ್ ಸಂಚಾರ ಏಪ್ರಿಲ್ ೧೯ರಂದು ಆರಂಭವಾದರೂ ನಿರಿಕ್ಷೀತ ಪ್ರಯಾಣಿಕರು ಇರಲಿಲ್ಲ.
ಅದಾದ ಬಳಿಕ ಕೊರೋನಾ ಬಸ್ ಸಂಚಾರ ತಡೆಹಿಡಿದು ಎರಡು ತಿಂಗಳ ಬಳಿಕ ಇದೀಗ ಮತ್ತೆ ಬಸ್ ಸಂಚಾರ ಸೋಮವಾರದಿಂದ ಆರಂಭಗೊಂಡಿದೆ.ಪ್ರಥಮ ದಿನ ಕುಮಟಾ, ಭಟ್ಕಳ, ಗೇರುಸೊಪ್ಪಾ, ಶಿರಸಿ ಹಾಗೂ ಹುಬ್ಬಳ್ಳಿ ಮುಂತಾದ ಭಾಗಗಳಿಗೆ ಬೆರಳೆಣಿಕೆಯಷ್ಟು ಬಸ್ ಸಂಚರಿಸಿದೆ. ಕೊರೋನಾ ಸುರಕ್ಷಿತ ಕ್ರಮದ ಮೂಲಕ ಬಸ್ ಸಂಚಾರ ಆರಂಭಗೊಂಡಿದ್ದು ಕೆಲವೇ ದಿನದಲ್ಲಿ ಗ್ರಾಮೀಣ ಭಾಗಗಳಿಗೆ ಸೇವೆ ಆರಂಭಿಸಲಾಗುವುದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಸೋಮವಾರದಿಂದ ಅಂಗಡಿ ತೆರೆದಿದ್ದು ಸಂಜೆ ೫ ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸಿದ್ದಾರೆ. ಸಾರ್ವಜನಿಕರು ಅಗತ್ಯವಿರುವ ಸಾಮಗ್ರಿಯನ್ನು ಖರೀದಿ ನಡೆಸಿದರು. ಅಲ್ಲಲ್ಲಿ ಸಾಮಾಜಿಕ ಅಂತರ ಮರೆತ ಸಾರ್ವಜನಿಕರು ಕೆಲವಡೆ ಮಾಸ್ಕ ಹಾಕದೆ ಅಸಡ್ಡೆ ತೋರುದರಿಂದ ಕೋರೊನಾ ಉಲ್ಬಣವಾಗುವ ಸಾಧ್ಯತೆ ಇದೆ.
Leave a Comment