ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆ ಹೊನ್ನಾವರ, ಅರಣ್ಯ ಇಲಾಖೆ ಹಾಗೂ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆ, ಕೊಳಗದ್ದೆ ಇವರ ಸಂಯುಕ್ತ ಆಶ್ರಯದಲ್ಲಿ “ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ” ಇದರ ವಾರ್ಷಿಕೋತ್ಸವ ಪ್ರಯುಕ್ತ “ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮ”ದಡಿ ಹಣ್ಣಿನ ಗಿಡ ನಾಟಿ ಕಾರ್ಯಕ್ರಮಹಮ್ಮಿಕೊಳ್ಳಲಾಗಿತ್ತು.
ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ ಡಿ ವೀರೇಂದ್ರ ಹೆಗ್ಗಡೆಯವರ ಕರೆಯ ಮೆರೆಗೆ “ಭೂಮಿ ತಾಯಿಯನ್ನು ರಕ್ಷಿಸಿ ಹಾಗೂ ಮುಂದಿನ ಪೀಳಿಗೆಗೆ ವರ್ಗಾಯಿಸಿ” ಎಂಬ ಧ್ಯೇಯದಡಿ ಕಾಡು ಪ್ರಾಣಿಗಳು ಹಾಗೂ ಪಕ್ಷಿ ಹಾಗೂ ಇತರ ಜೀವಸಂಕುಲಗಳಿಗೆ ಪೂರಕ ಆಹಾರ ನೀಡುವ ಸಸಿಗಳನ್ನು ನಾಟಿ ಮಾಡುವ ಮೂಲಕ ವಿನೂತನವಾಗಿ ವಾರ್ಷಿಕೋತ್ಸವ ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಸಿದ್ದಿವಿನಾಯಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಕ್ರಷ್ಣಮೂರ್ತಿ ಭಟ್ ಚಾಲನೆ ನೀಡಿದರ. ಸಭಾ ಕಾರ್ಮಾಕ್ರಮ ಉದ್ದೇಶಿಸಿ ಮಾತನಾಡಿ ಧರ್ಮಸ್ಥಳ ಈ ನಾಡಿಗೆ ಮಾದರಿಯಾದ ಇಂತಹ ಅದೆಷ್ಟೋ ಕಾರ್ಯಕ್ರಮ ಸಂಘಟಿಸಿ ಮನುಕುಲದ ಸಾರ್ಥಕತೆಗೆ ಮುನ್ನುಡಿ ಬರೆಯುತ್ತಿದೆ ನಾವುಗಳು ಈ ಕಾರ್ಯಕ್ರಮದ ಸಂದೇಶವನ್ನು ಉಳಿಸಿ ಬೆಳೆಸಿಕೊಂಡು ಮುನ್ನಡೆಸಿಕೊಂಡು ಹೋಗಬೇಕಿದೆ. ಈ ಸಂಸ್ಥೆ ಯಿಂದಾಗಿ ಗ್ರಾಮದಲ್ಲಿ ಅಕ್ಷರ,ಆಹಾರ,ಸ್ವ ಉದ್ಯೋಗ,ಸಾಮಾಜಿಕ ಕಳ ಕಳಿ, ಆರ್ಥಿಕತೆ ಸುಧಾರಣೆಯಲ್ಲಿ ಮಹತ್ತರ ಸಾಧನೆ ಸಾಧಿಸಿದೆಎಂದ ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮಾಭಿವ್ರದ್ಧಿ ಯೊಜನೆಯ ಯೋಜನಾಧಿಕಾರಿಗಳಾದ ವಾಸಂತಿ ಅಮೀನ್, ಕವಲಕ್ಕಿ ಶಾಖಾ ಅರಣ್ಯಾಧಿಕಾರಿ ರವಿ ನಾಯ್ಕ ಖರ್ವಾ ಗ್ರಾಮ.ಪಂಚಾಯತ ಅಧ್ಯಕ್ಷೆ ಭವಾನಿ ಗೌಡ,ವಲಯ ಮೇಲ್ವಿಚಾರಕರಾದ ಶ್ರೀ ನಾಗರಾಜ್.ಕೆ, ಶ್ರೀಕಾಂತ್, ಘಟಕ ಸಂಯೋಜಕಿ ಪೂರ್ಣಿಮಾ ಗೌಡ, ಖರ್ವಾ,ಹೊನ್ನಾವರ,ಹಡಿನಬಾಳ ವಲಯದ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
Leave a Comment