ಯಲ್ಲಾಪುರ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಕೌಟ ಗೈಡ್ಸ , ರೆಡ್ಕ್ರಾಸ್ ಹಾಗೂ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ರಾಷ್ಟಿçÃಯ ಆರೋಗ್ಯ ಅಭಿಯಾನದಡಿ ಕೋವಿಡ್-೧೯ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
yellapur news ; join our group
ನಂತರ ಪ್ರಾಂಶುಪಾಲೆ ಡಾ ದಾಕ್ಷಾಯಣಿ ಜಿ ಹೆಗಡೆ ಮಾತನಾಡಿ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆ ರಾಜ್ಯಾದಂತ ಪದವಿ ವಿದ್ಯಾರ್ಥಿಗಳಿಗೆ ಕೋವಿಡ್-೧೯ ನಿಂದ ರಕ್ಷಣೆ ಪಡೆಯಲು ಲಸಿಕಾ ಅಭಿಯಾನ ಹಮ್ಮಿಕೊಂಡಿದ್ದು. ಈ ಲಸಿಕಾ ಅಭಿಯಾನದಲ್ಲಿ ಕಾಲೇಜಿನ ೧೮೬ ವಿದ್ಯಾರ್ಥಿಗಳು ಪಾಲ್ಗೊಂಡು ಲಸಿಕೆಯನ್ನು ಪಡೆದುಕೊಂಡಿದ್ದಾರೆ. ತಾಲೂಕಾ ಆರೋಗ್ಯ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಲಸಿಕಾ ವ್ಯವಸ್ಥೆ ಮಾಡಿದ್ದು ವಿದ್ಯಾರ್ಥಿಗಳು ಕಾಲೇಜಿನ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ ತೆಗೆದುಕೊಂಡು ಹೋಗಿ ಲಸಿಕೆಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಈ ಲಸಿಕಾ ಅಭಿಯಾನದಲ್ಲಿ ರೋರ್ಸ್ ಸ್ಕೌಟ್ಸ್ ಲೀಡರ್ ಡಿ ಜಿ ತಾಪಸ್, ಎನ್ಎಸ್ಎಸ್ ಹಾಗೂ ರೆಡ್-ಕ್ರಾಸ್ ಸಂಚಾಲಕ ರಾಮಕೃಷ್ಣಗೌಡ ಹಾಗೂ ಐಕ್ಯೂಎಸಿ ಸಂಚಾಲಕ ಡಿ ಎಸ್ ಭಟ್, ಉಪಸ್ಥಿತರಿದ್ದರು. ಹಾಗೂ ತಾಲೂಕು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ತಾಲೂಕು ಶಿಕ್ಷಣ ವೈದ್ಯಾಧಿಕಾರಿ ಸೂರ್ಯನಾರಾಯಣ ಭಟ್, ಡಾ|| ಕಲ್ಲೇಶ ಪಾಟೀಲ, ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೀಣ ಇನಾಮದಾರ ಹಾಗೂ ಮಂಜುಳಾ ಆರ್ ನಾಯ್ಕ, ಪದ್ಮಾವತಿ ಚಲವಾದಿ, ರೇವತಿ ನಾಯ್ಕ, ನಿಂಗನಗೌಡ ಪಾಟೀಲ, ಸರಸ್ವತಿ ಉಪ್ಪಾರ, ಹಾಗೂ ಪರಶುರಾಮ ದೋನುರೆ ಲಸಿಕಾ ಕಾರ್ಯಕ್ರಮ ನಡೆಸಿಕೊಟ್ಟರು.
Leave a Comment