• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವೈದ್ಯ ದಂಪತಿಗೆ ಆತ್ಮೀಯ ಸನ್ಮಾನ

July 6, 2021 by Jayaraj Govi Leave a Comment

ಯಲ್ಲಾಪುರ : ಹೊಸದಿಗಂತ ಪತ್ರಿಕೆಯ ವತಿಯಿಂದ ವೈದ್ಯರ ದಿನಾಚರಣೆ  ನಿಮಿತ್ತ ಸೋಮವಾರ ಸಂಜೆ ಯಲ್ಲಾಪುರದ ಸರ್ಕಾರಿ ಆಸ್ಪತ್ರೆಯ ವೈದ್ಯ ದಂಪತಿಯಾದ  ಡಾ.ದೀಪಕ ಭಟ್ಟ ಮತ್ತು ಡಾ
ಸೌಮ್ಯ ಕೆ.ವಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

IMG 20210705 WA0188
ಹೊಸದಿಗಂತ ಪತ್ರಿಕೆಯ ವತಿಯಿಂದ ವೈದ್ಯರ ದಿನಾಚರಣೆ ನಿಮಿತ್ತ ಯಲ್ಲಾಪುರದ ಸರ್ಕಾರಿ ಆಸ್ಪತ್ರೆಯ ವೈದ್ಯ ದಂಪತಿಯಾದ ಡಾ.ದೀಪಕ ಭಟ್ಟ ಮತ್ತು ಡಾ ಸೌಮ್ಯ ಕೆ.ವಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು


ಈ ವೈದ್ಯ ದಂಪತಿಯ ಮದುವೆಯ ವಾರ್ಷಿಕೋತ್ಸವದ ದಿನವೇ ಸರ್ಕಾರಿ ಆಸ್ಪತ್ರೆ ಸಭಾಭವನದಲ್ಲಿ  ಸರಳ ಸುಂದರವಾಗಿ ಈ ಸನ್ಮಾನ ಕಾರ್ಯಕ್ರಮ ಜರುಗಿತು.
ಸನ್ಮಾನ ನಡೆಸಿ ತಾಲೂಕು ಆಡಳಿತ  ವೈದ್ಯಾಧಿಕಾರಿ ಡಾ. ನರೇಂದ್ರ  ಪವಾರ್ ಮಾತನಾಡಿ, ಸನ್ಮಾನ ಎನ್ನುವುದು ಪ್ರತಿಯೊಬ್ಬನಿಗೂ  ಜನರ ಸೇವೆಗೆ  ಇನ್ನಷ್ಟು ತೊಡಗುವಂತೆ ಮಾಡುವ ವೇಗ ವರ್ಧಕ ಇದ್ದಂತೆ.ಈ ವೈದ್ಯ ದಂಪತಿ  ತಮ್ಮ ಜನಪರ ಕಾಳಜಿ ಕರ್ತವ್ಯ ನಿಷ್ಠೆಯ ಮೂಲಕ ಯಲ್ಲಾಪುರದ  ಆಸ್ತಿಯಾಗಿದ್ದು  ಇವರನ್ನು ಹೊಸದಿಗಂತ ಪತ್ರಿಕೆ ಗೌರವಿಸುವ ಮೂಲಕ  ಮಾದರಿ ಕಾರ್ಯ ಮಾಡಿದೆ. ವೈದ್ಯರಲ್ಲಿ ಜನರಿಗಾಗಿ ಕೆಲಸ ಮಾಡುವ ಉತ್ಸಾಹ ಹೆಚ್ಚುವಂತಾಗಿದೆ ಎಂದರು.
ಹೊಣೆ ಹೆಚ್ಚಿದೆ:

    • IMG 20210705 WA0161


      ಸನ್ಮಾನ ಸ್ಬೀಕರಿಸಿ ಮಾತನಾಡಿದ  ಡಾ. ಸೌಮ್ಯ , ಹೊಸದಿಗಂತ ನೀಡಿದ ಸನ್ಮಾನ ನಮ್ಮ ಹೊಣೆಗಾರಿಕೆ ಹೆಚ್ಚಿಸಿದ್ದು, ಜನರಿಗಾಗಿ  ಇನ್ನಷ್ಟು ಸಮರ್ಪಿತ ಸೇವೆ ಮಾಡುವಂತೆ ಪ್ರೇರಣೆಯಾಗಿದೆ ಎಂದರು.
      ಇದೇ ಸಂದರ್ಭದಲ್ಲಿ ಹಿರಿಯ ಸ್ಟಾಫ್ ನರ್ಸ್ ಸಾರಮ್ಮಾ ಅವರ  ಸೇವೆಯನ್ನು  ಗುರುತಿಸಿ  ಅವರ ಜನ್ಮದಿನದ ಸಂದರ್ಭದಲ್ಲಿ ಗೌರವಿಸಲಾಯಿತು.

      ವ್ಯಕ್ತಿಯೊಬ್ಬನ ಮೇಲೆ ಕರಡಿ ದಾಳಿ

      ಹೊಸದಿಗಂತ ಯಲ್ಲಾಪುರ ವರದಿಗಾರರಾದ ಪ್ರಭಾವತಿ
      ಗೋವಿ ಸ್ವಾಗತಿಸಿದರು.
      ಹೊಸದಿಗಂತ ಹುಬ್ಬಳ್ಳಿ ಆವೃತ್ತಿ ಮುಖ್ಯಸ್ಥ ವಿಠ್ಠಲದಾಸ ಕಾಮತ್ ಪ್ರಾಸ್ತಾವಿಕ ಮಾತನಾಡಿದರು. ಪತ್ರ ಕರ್ತ &ವಿತರಕ ಜಯರಾಜ ಗೋವಿ ವಂದಿಸಿದರು.
      ವೈದ್ಯರಾದ ಡಾ. ನೋಹನ್ ನಿರ್ವಹಿಸಿದರು.
      ಡಾ. ಕುಲು ಸಿಂಗ್, ಡಾ. ಗೀತಾ ,ಲತಾ ವಿ. ಕಾಮತ್  ಉಪಸ್ಥಿತರಿದ್ದರು.  ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಡಾ. ದೀಪಕ ಭಟ್ಟ ಪ್ರಸೂತಿ ವೈದ್ಯರಾಗಿ, ಡಾ. ಸೌಮ್ಯ ಕೆ.ವಿ. ಅಂಕಣಕಾರರಾಗಿ,ನೇತ್ರ ತಜ್ಞರಾಗಿ, ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ.

      Share this:

      • WhatsApp
      • Twitter
      • Facebook
      • Telegram
      • Email
      • Print

      Related News:

      Filed Under: Canara News, Yellapur

      Explore More:

      About Jayaraj Govi

      Reader Interactions

      Leave a Comment Cancel reply

      Primary Sidebar

      Subscribe via Email

      Enter your email address to subscribe to Canara Buzz and receive latest news articles by email.

      • 2,076,810 visitors

      Footer

      ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

      March 24, 2025 By Sachin Hegde

      ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

      March 7, 2025 By Sachin Hegde

      ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

      February 25, 2025 By Sachin Hegde

      ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

      February 22, 2025 By Sachin Hegde

      ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

      February 16, 2025 By Sachin Hegde

      ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

      February 8, 2025 By Sachin Hegde

      © 2025 Canara Buzz · Contributors · Privacy Policy · Terms & Conditions · Member of Digital Avatar

       

      Loading Comments...