ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ನಾಡದೋಣಿ ಮುಳುಗಡೆಯಾಗಿ ದೋಣಿಯಲ್ಲಿದ್ದಮೂರು ಜನ ಮೀನುಗಾರರ ರಕ್ಷಣೆ ಮಾಡಿದ್ದು, ಓರ್ವ ಮೀನುಗಾರ ನಾಪತ್ತೆಯಾದ ಘಟನೆ ಹೊನ್ನಾವರ ತಾಲೂಕಿನ ಕಾಸರಕೋಡು ಇಕೋ ಬೀಚ್ ಬಳಿ ಸೋಮವಾರ ಮುಂಜಾನೆ ನಡೆದಿದೆ.
ಉದಯ್ ದಾಮೋದರ್ ತಾಂಡೇಲ್ ಕಾಣೆಯಾದ ಮೀನುಗಾರನಾಗಿದ್ದು ವಿಜಯ್ ಕ್ರಿಸ್ತಾದಾಸ್ ಫರ್ನಾಂಡಿಸ್,ಶಂಕರ್ ತಾಂಡೇಲ್,ಕಾಮೇಶ್ವರ್ ತಾಂಡೇಲ್ ರಕ್ಷಣೆಗೊಳಗಾದವರಾಗಿದ್ದಾರೆ. ಎಂದಿನಂತೆ ಸೋಮವಾರ ಬೆಳಗ್ಗೆ ಮೀನುಗಾರುಕೆಗೆ ಹೊನ್ನಾವರದ ಕಾಸರಕೋಡು ಭಾಗದಿಂದ ತೆರಳಿದ್ದ ದೋಣಿಯು ಇಕೋ ಬೀಚ್ ಬಳಿ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಡೆಯಾಗಿದೆ.
ಈವೇಳೆ ಮೂರು ಜನ ಈಜಿ ದಡದ ಭಾಗಕ್ಕೆ ಬಂದಿದ್ದು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಒರ್ವ ಮೀನುಗಾರ ನಾಪತ್ತೆ ಯಾಗಿದ್ದು ಶೋಧ ಕಾರ್ಯ ಮುಂದುವರೆದಿದೆ. ಸ್ಥಳಕ್ಕೆ ಪೋಲಿಸರು ದೌಡಾಯಿಸಿದ್ದು ಶೌಧ ಕಾರ್ಯದಲ್ಲಿ ತೊಡಗಿದ್ದಾರೆಖಾಸಗಿ ವಾಣಿಜ್ಯ ಬಂದರು ಯೋಜನೆಯ ಅಚಾತುರ್ಯದಿಂದ ಮೀನುಗಾರರ ಪ್ರಾಣಕ್ಕೆ ಸಮಸ್ಯೆ ಆಗಿದೆ ಇದಕ್ಕೆ ನೇರ ಹೊಣಿ ಎಂದು ಚಂದ್ರಕಾಂತ ಕೊಚಡೆಕರ್ ಆರೋಪಿಸಿದ್ದಾರೆ.
ಹೊನ್ನಾವರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿಖಾಸಗಿ ವಾಣಿಜ್ಯ ಯೋಜನೆಗೆ ರಸ್ತೆ ನಿರ್ಮಿಸುವ ಭರಾಟೆಯಲ್ಲಿ ಟೊಂಕ ಸಮುದ್ರತೀರದಲ್ಲಿನ ಮೀನುಗಾರರ ನಾಡದೋಣಿಯ ಶೆಡ್ ಗಳನ್ನು ಧ್ವಂಸಗೊಳಿಸಿದ್ದಾರೆ. ಸಮುದ್ರ ತೀರದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ಆತಂಕ ತಂದೊಡ್ಡಿದ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಕಂಪೆನಿಯ ಅಚಾತುರ್ಯದಿಂದ ಸೋಮವಾರ ಮೀನುಗಾರನೊಬ್ಬನು ಅವಘಡಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಇದರಿಂದ ಮೀನುಗಾರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಮೀನುಗಾರರ ಕುಟುಂಬಕ್ಕೆ ಆಗಿರುವ ನಷ್ಟವನ್ನು ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಕಂಪೆನಿ ಮತ್ತು ಸರಕಾರ ಜಂಟಿಯಾಗಿ ಭರಿಸಬೇಕು ಎಂದು ಚಂದ್ರಕಾಂತ ಕೊಚಡೆಕರ್ ಆಗ್ರಹಿಸಿದ್ದಾರೆ.
Leave a Comment