ಉತ್ತರ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ವತಿಯಿಂದ ಹಳದಿಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಸಂಭ್ರಮದ ಸ್ವಾಗತ ನೀಡಲಾಯಿತು. ತೈಲ ಬೆಲೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಲು ಜಿಲ್ಲಾ ಕಾಂಗ್ರೆಸ್ ವತಿಯಿಂದ ಶಿರಸಿಯಲ್ಲಿ ನಡೆಯಲಿರುವ ಸೈಕಲ್ ಜಾಥಾದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರನ್ನು ಮಾರ್ಗ ಮಧ್ಯೆ ಹಳದಿಪುರದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಕಿಸಾನ್ ಕಾಂಗ್ರೆಸ್ ಪದಾಧಿಕಾರಿಗಳು ಕಾರ್ಯಕರ್ತರು ಸಂಭ್ರಮದಿಂದ ಪಟಾಕಿ ಸಿಡಿಸಿ ಅದ್ದೂರಿ ಸ್ವಾಗತ ಕೋರಿದರು.
ಅಪಾರ ಸಂಖ್ಯೆಯ ಕಾರ್ಯಕರ್ತರನ್ನುಕಂಡು ಸಂತಸದಿಂದ ಕಾರ್ಯಕರ್ತರ ಬಳಿ ಬಂದ ಡಿ ಕೆ ಶಿವಕುಮಾರ್ ಅವರನ್ನು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೊಕಾ ಹಸಿರು ಶಾಲ್ ಹೊದೆಸಿ ಹೂಗುಚ್ಛ ನೀಡಿ ಸ್ವಾಗತಿಸುತ್ತಿದ್ದಂತೆ ಕಾರ್ಯಕರ್ತರು ಜಯಘೋಷ ಮೊಳಗಿಸಿದರು.
ಮುಂದಿನ ಮುಖ್ಯಮಂತ್ರಿ ಎಂದು ಕೆಲವರು ಜಯಕಾರ ಮಾಡಿದ್ದು ವಿಶೇಷ. ಈ ಸಂದರ್ಭದಲ್ಲಿ ರಾಜ್ಯ ಕಿಸಾನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದೀಪಕ ನಾಯ್ಕ ಮುಖಂಡರಾದ ಜನಾರ್ಧನ ನಾಯ್ಕ ವಿನೋದ ನಾಯ್ಕ ಕರ್ಕಿ, ನವೀನ ನಾಯ್ಕ ಹಳದಿಪುರ, ಗಿರೀಶ ಗೌಡ, ರಾಮಚಂದ್ರ ನಾಯ್ಕ, ಶಂಶೀರ್ ಖಾನ್, ರವಿ ಮೊಗೇರ, ನಾಗವೇಣಿ ಗೌಡ. ಲಕ್ಷ್ಮಿ ಗೊಂಡ, ಹುಲಿಯಣ್ಣ, ನಾರಣಪ್ಪ ಗೌಡ, ವಿನಾಯಕ ನಾಯ್ಕ, ಪಾಂಡು ಹರಿಕಾಂತ, ಎಲ್ ಎನ್ ಭಟ್ಟ, ಬಾಲು ಭಂಡಾರಿ, ಸುರೇಶ ಮೇಸ್ತಾ, ಗಜಾನನ ನಾಯ್ಕ ಸಾಲಕೋಡ, ನಾಗೇಶ ನಾಯ್ಕ, ರಿಯಾಜ ಶೇಖ, ಗಣೇಶ ಹೆಗಡೆ, ಮಹೇಶ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.
Leave a Comment