ಯಲ್ಲಾಪುರ: ಇಲಾಖಾ ಪ್ರಗತಿಪರಿಶೀಲನಾ ಸಭೆಗೆ ಹಿರಿಯ ಅಧಿಕಾರಿಗಳು ಆಗಮಿಸಬೇಕು .ಒಂದುವೇಳೆ ಅವರಿಗೆ ಬರಲು ಆಗದಿದ್ದರೆ ಮುಂಚಿತವಾಗಿ ಮಾಹಿತಿÀ ನೀಡಬೇಕು.ಹಾಗೂ ಅವರ ಅಧೀನ ಅಧಿಕಾರಿಗಳು ಇಲಾಖೆಗೆ ಸಂಬAಧಿಸಿದ ವರದಿ,ಮಾಹಿತಿಯನ್ನು ಸಮರ್ಪಕಾಗಿ ನೀಡಲು ತಯಾರಿ ಮಾಡಿಕೊಂಡು ಬರಬೇಕು ಕೇವಲ ಹಾಜರಾತಿಗೆಂಬAತೆ ಬರಬಾರದು ಎಂದು ತಾಪಂ ಆಡಳಿತಾಧಿಕಾರಿ ನಟರಾಜ ಟಿ.ಪಿ ಹೇಳಿದರು.ಅವರು ತಾಲೂಕಾ ಪಂಚಾಯತ ಸಭಾಭವನದಲ್ಲಿ ನಡೆದಮಾಸಿಕ ಪ್ರಗತಿ ಪರಿಶೀಲನಾ ಸಭೆ ಯಲ್ಲಿ ಹೇಳಿದರು.
ಪ್ರಸಕ್ತ ಸಾಲಿನಲ್ಲಿ ೬೦ ಕೋಟಿ ೯ಲಕ್ಷ ೩೯ ಸಾವಿರ ರೂಗಳು ತಾಪಂ ಸಿಬ್ಬಂದಿಗಳ ವೇತನ ಸೇರಿದಂತೆ ಇತರ ಕಾರ್ಯಗಳಿಗೆ ಸರ್ಕಾರದ ಅನುದಾನ ಬಿಡುಗಡೆಯಾದ ಕುರಿತು ಲೆಕ್ಕಾಧಿಕಾರಿ ಮೋಹನ ವಿವರವಾದ ಮಾಹಿತಿ ನೀಡಿದರು.
ಪ್ರಸಕ್ತ ಸಾಲಿನಲ್ಲಿ ತಾಲೂಕಿಗೆ ೫ ಆಂಗ್ಲ ಮಾಧ್ಯಮ ಶಾಲೆ ಮಂಜೂರಾಗಿದ್ದು , ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದೆ. ಎಸ್ ಎಸ್ಎಲ್ಸಿ ಪರೀಕ್ಷೆ ಜು೧೯ಮತ್ತು,೨೦ರಂದು ೮ ಕೇಂದ್ರಗಳಲ್ಲಿ ಕೋವಿಡ ನಿಯಮಾನುಸಾರ ನಡೆಯಲಿದೆ ಎಂದು ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಶ್ರೀರಾಮ ತಿಳಿಸಿದರು.
ತಾಲೂಕಾ ಆರೋಗ್ಯಾಧಿಕಾರಿ ಡಾ ನರೆಂದ್ರ ಪವಾರ ಕೋರೋನಾ ಲಸಿಕೆ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು ,ಲಸಿಕೆ ಕೊರತೆಯಿಂದಾಗಿ ಹಿನ್ನಡೆಯಾಗುತ್ತಲಿದೆ. ಪ್ರತಿನಿತ್ಯ ಅನಿವಾರ್ಯವಾಗಿ ಹೊರಗಡೆ ಓಡಾಡುತ್ತಿರುವ ಸರಕಾರಿ ಆಧಿಕಾರಿಗಳು ತಮ್ಮ ಹಾಗೂ ಕುಟುಂಬದವರ ಆರೋಗ್ಯದ ದೃಷ್ಟಿಯಿಂದ ಪ್ರತಿತಿಂಗಳು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಹಾಗೂ ಕಡ್ಡಾಯವಾಗಿ ಮಾಸ್ಕ ಧರಿಸಿ ಮೂರನೇ ಅಲೆಯ ಎದುರಿಸಲು ನಿಯಮ ಪಾಲಿಸಿ ಎಂದು ವಿನಂತಿಸಿದರು
ಪಶು ಸಂಗೋಪನೆ, ತೋಟಗಾರಿಕೆ, ಕೃಷಿ ಕೆಎಸ್ ಆರ್ ಟಿಸಿ ಮುಂತಾದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು ಮಾಹಿತಿ ನೀಡಿದರು.
ತಾಲೂಕಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಗದೀಶ ಕಮ್ಮಾರ, ವ್ಯವಸ್ಥಾಪಕ ಗಂಗಾಧರ ಭಟ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅವಧಿ ಪೂರ್ಣಗೊಳಿಸಿದ ೧೧ ತಾಲೂಕಾ ಪಂಚಾಯತಿ ಸದಸ್ಯರು ಹಾಗೂ ೨ ಜಿಲ್ಲಾ ಪಂಚಾಯತಿಸದಸ್ಯರನ್ನು ತಾಪಂ ವತಿಯಿಂದ ಗೌರವಿಸಿ ಬಿಳ್ಕೋಡಲಾಯಿತು. ಎಲ್ಲ ಸದಸ್ಯರು ಗೌರವ ಸ್ವೀಕರಿಸಿ ಮಾತನಾಡಿ ತಾಪಂ ಹಾಗೂ ಎಲ್ಲ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು, ಜನಪ್ರತಿನಿಧಿಗಳ, ಮಾಧ್ಯಮದವರ ಸಹಕಾರ ನೀಡಿದ್ದರಿಂದ ಸುಲಲಿತವಾಗಿ ಆಡಳಿತ ನಡೆಸಲು ಸಾಧ್ಯವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.
Leave a Comment