ಯಲ್ಲಾಪುರ : ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ರವಿವಾರ ಸಂಜೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಕಾಳಮ್ಮ ನಗರದಲ್ಲಿ ನಡೆದಿದೆ. ಮೃತಳು ಬೆಳಗಾವಿಯ ತಿಲಕವಾಡಿ ಹಾಲಿ ಪಟ್ಟಣದ ದರ್ಗಾಗಲ್ಲಿ ನಿವಾಸಿ ರಶ್ಮೀ ಸುಧೀರ ರಾಯ್ಕರ (೪೮) ಎಂಬ ಗೃಹಿಣಿಯಾಗಿದ್ದಾಳೆ.
ಕಳೆದ ೧೦ ವರ್ಷದಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು ಎಷ್ಟೇ ಔಷದೋಪಚಾರ ಮಾಡಿದರೂ ಗುಣಮುಖರಾಗದಿದ್ದರಿಂದ ಅದರೊಡನೆ ಕೊವಿಡ್ ಕಾಯಿಲೆಯು ಬಂದಿದ್ದರಿAದ ಮನನೊಂದು ಪಟ್ಟಣದ ಕಾಳಮ್ಮ ನಗರದ ತಾಲೂಕಾ ಕ್ರೀಡಾಂಗಣ ಬಳಿಯಿರುವ ಗಣೇಶ ಕಟ್ಟೆ ಯ ಪಾಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಅಗ್ನಿಶಾಮಕದಳವರು ಸ್ಥಳಕ್ಕೆ ಆಗಮಿಸಿ ಅವಳನ್ನು ಬಾವಿಯಿಂದ ಹೊರತೆಗೆದಾಗಗಲೇ ಮೃತಪಟ್ಟಿದ್ದಳು. ಮೃತಳ ಪುತ್ರ ನಿಖಿಲ ಸುಧೀರ ರಾಯ್ಕರ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Leave a Comment