ಭಟ್ಕಳ ;
ಮೋಟಾರ್ ಬೈಕಿನಲ್ಲಿ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಮಹಿಳೆಯೋರ್ವಳು ಮುರ್ಡೇಶ್ವರ ತಾಣ ವ್ಯಾಪ್ತಿಯ ಬೆಂಗ್ರೆ ರಾಷ್ಟ್ರೀಯ ಹೆದ್ದಾರಿ ಮೇಲೆ ಬೈಕಿಂದ ಬಿದ್ದು ಗಾಯ ಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.
ಜೂನ್ 17ರಂದು 8:15 ರ ಸುಮಾರಿಗೆ ಅಣ್ಣನನ್ನು ಮುರುಡೇಶ್ವರದ ಆರ್ .ಎನ್. ಎಸ್ ಆಸ್ಪತ್ರೆಗೆ ದಾಖಲಿಸಿ ನಂತರ ತಮ್ಮ ತಮ್ಮನ ಬೈಕಿನಲ್ಲಿ ಬರುತ್ತಿರುವ ಮಹಿಳೆ ಮೇರಿ ಕೋo ಜಾನ್ ಮಿರಾಂಡ (43) ಬೈಕ್ನಿಂದ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿ ದ್ದರಿಂದ ಆರ್ .ಎನ್. ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಬೆಳಗ್ಗಿನ ಜಾವ ಮೃತ ಪಟ್ಟಿದ್ದಾರೆ .ಈ ಕುರಿತು ಮುರುಡೇಶ್ವರದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು . ಸಬ್ ಇನ್ಸ್ಪೆಕ್ಟರ್ ರವೀಂದ್ರ ಬಿರಾದಾರ ತನಿಖೆ ಕೈಗೊಂಡಿದ್ದಾರೆ.
Leave a Comment