ಯಲ್ಲಾಪುರ : ಮಲೆನಾಡಿನ ಮನೆಯಂಗಳದಲ್ಲಿಯೇ ಔಷಧಿ ಹಾಗೂ ಹೂಗಳ ಸಸ್ಯ ಪರಂಪರಾಗತವಾಗಿ ಎಂಬAತೆ ಕಂಡುಬರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರದ್ದು ಧಾವಂತದ ಬದುಕಾಗಿದ್ದರಿಂದ ಗಿಡಗಳನ್ನು ಬೆಳೆಸುವ ಆಸಕ್ತಿ ಕಡಿಮೆಯಾಗಿದೆ.
ಇಂತಹ ಸಸುಂದರ ಹೂವು, ಸಸ್ಯ ಪ್ರದರ್ಶನ ಹಾಗೂ ವಿನಿಮಯ ಕಾರ್ಯಕ್ರಮ ಮೂಲಕ ಮತ್ತೆ ಗಿಡಗಳ ಬೆಳೆಸಲು ಪ್ರೇರೆಪಿಸುತ್ತದೆ. ಎಂದು ಜಯಶ್ರೀ ಹೆಗಡೆ ಹೇಳಿದರು. ಅವರು ಯಲ್ಲಾಪುರದ ತ್ರಿಪುರಾಂಬಿಕಾ ಮಹಿಳಾ ಒಕ್ಕೂಟ, ಶ್ರೀಮಾತಾ ರೈತ ಉತ್ಪಾದಕ ಕಂಪನಿ ನಿಯಮಿತ ಹಾಗೂ ಮಾತೃಮಂಡಳಿ ಇವುಗಳ ಸಹಯೋಗದಲ್ಲಿ ಪಟ್ಟಣದ ಎಪಿಎಂಸಿ ಆವಾರದ ಶ್ರೀಮಾತಾ ಟ್ರೇಡಿಂಗ್ ಕಂಪನಿಯ ಸೇಲ್ ಹಾಲ್ನಲ್ಲಿ “ಸಸ್ಯ ಪ್ರದರ್ಶನ ಮತ್ತು ವಿನಿಮಯ’ವನ್ನು ಕಾರ್ಯಕ್ರಮ ಉದ್ಘಾಟಿಸ ಮಾತನಾಡಿದರು.
ಮಹಿಳೆಯರು ಹವ್ಯಾಸಎಂಬAತೆ ಸಸ್ಯ ಪಾಲನೆಯಲ್ಲಿ ತೊಡಗಿಕೊಂಡರೂ ಅದರಿಂದ ಆರ್ಥಿಕವಾಗಿ ಸ್ವಾವಲಂಬಿಯೂ ಆಗಬಹುದಾಗಿದೆ. ಮನೆಯಂಗಳದಲ್ಲಿ ಔಷಧಿ ಸಸ್ಯ ಬೆಳೆಸಿ ಸಣ್ಣ ಪುಟ್ಟ ಕಾಯಿಲೆಗಳಿಂದ ದೂರಿವಿಡಬಹುದಾಗಿದೆ .ಎಂದರು . ವಿಶ್ವದರ್ಶನ ಪ್ರೌಢಶಾಲೆಯ ಮುಖ್ಯೋಪಾದ್ಯಾಪಕಿ ಮುಕ್ತಾ ಶಂಕರ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳೆಯರು ಜಂಜಡದÀ ಬದುಕಿನ ನಡುವೆ ಮನೆಯಂಗಳದಲ್ಲಿ ನಿತ್ಯ ಹೂವು ಹಣ್ಣು ,ತರಕಾರಿ ಬೆಳೆಸುವ ಮೂಲಕ ಮಾನಸಿಕ ಕ್ಲೇಶವೂ ಕಡಿಮೆಯಾಗಿ ಆರೋಗ್ಯಯುತ ಜೀವನದೊಂದಿಗೆ ಉತ್ತಮ ಪರಿಸರ ಹಾಗೂ ಸಂಸ್ಕೃತಿಯನ್ನು ರೂಢಿಸಿಕೊಂಡAತಾಗುತ್ತದೆ.ಎAದರು.
ಮಾತೃಡಳಿಯ ಅದ್ಯಕ್ಷೆ ರಮಾ ದೀಕ್ಷಿತ,ಅನಿತಾ ಭಟ್ಟ, ಸವಿತಾ ಭಟ್ಟ ,ಆಶಾ ಪಟೇಲ, ನೇತ್ರಾ ಭಟ್ಟ ಮುಂತಾದವರು ಇದ್ದರು. ತ್ರಿಪುರಾಮಹಿಳಾ ಒಕ್ಕೂಟದ ಅಧ್ಯಕ್ಷೆ ಜಾಹ್ನವಿ ಭಟ್ಟ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಗಾಯತ್ರಿ ಬೊಳಗುಡ್ಡೆ ನಿರ್ವಹಿಸಿದರು.ಖಜಾಂಚಿ ಸಂಧ್ಯಾ ಕೊಂಡದಕುಳಿ ವಂದಿಸಿದರು.
Leave a Comment