ಹೊನ್ನಾವರ: ಯಕ್ಷಗಾನ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಯಕ್ಷಗಾನ ಕಲೆಯನ್ನು ಗೌರವಿಸುವ ಕಾರ್ಯ ನಡೆಯಬೇಕು ಎಂದು ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಹೇಳಿದರು.
ತಾಲೂಕಿನ ಮಾಳ್ಕೋಡದಲ್ಲಿ ಯಕ್ಷ ಪಲ್ಲವಿ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಯಕ್ಷಗಾನ ಕಲೆಯು ಹಲವು ಸವಾಲುಗಳೊಂದಿಗೆ ಜನಮನದಲ್ಲಿ ನೆಲೆ ನಿಂತಿದೆ. ಯಕ್ಷ ಪಲ್ಲವಿ ಸಂಸ್ಥೆಯು ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವು ನೀಡುತ್ತಿದೆ. ಕಲಾವಿದರನ್ನು ಗೌರವಿಸುತ್ತಿದೆ ಎಂದು ಹೇಳಿದರು.
ಯಕ್ಷ ಪಲ್ಲವಿ ಸಂಸ್ಥೆಯ ಅಧ್ಯಕ್ಷ ಉದಯ ಹೆಗಡೆ ಮಾಳಕೋಡ ಪ್ರಾಸ್ತಾವಿಕ ಮಾತನಾಡಿದರು. ಶಾಸಕ ಸುನೀಲ್ ನಾಯ್ಕ, ಡಾ. ಐ.ಆರ್.ಭಟ್, ಯಕ್ಷಗಾನ ಅಕಾಡೆಮಿಯ ನಾಗರಾಜ ಜೋಷಿ, ಮುಖ್ಯಾಧ್ಯಾಪಕ ಎಂ.ಎಚ್.ನಾಯ್ಕ ಇತರರಿದ್ದರು. ನಂತರ ಸಿಂಚನಾ ಹೆಗಡೆ ಭಾಗವತಿಕೆಯಲ್ಲಿ ಯಕ್ಷ ರಸಸಂಜೆ ಮತ್ತು ಯಕ್ಷಗಾನ ವೈಭವ ಕಾರ್ಯಕ್ರಮ ನಡೆಯಿತು.
Leave a Comment