ಹೊನ್ನಾವರ ; ಪಟ್ಟಣ ಪಂಚಾಯತದಿಂದ ಬಡ ವಿಕಲಚೇತನರಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಮತ್ತು ವೀಲ್ ಚೇರ್ ವಿತರಿಸಲಾಯಿತು.
2020-21ನೇ ಸಾಲಿನ ಎಸ್. ಎಫ್. ಸಿ ಶೇ5% ವಿಕಲಚೇತನರಿಗೆ ಸೌಲಭ್ಯ ನೀಡುವ ಯೋಜನೆಯಲ್ಲಿ 49439 ರೂ. ವೆಚ್ಚದಲ್ಲಿ ಬಡ ವಿಕಲಚೇತನರಿಗೆ ವಿದ್ಯುತ ಚಾಲಿತ ಹೊಲಿಗೆ ಯಂತ್ರ 4 ಫಲಾನುಭವಿಳಾದ ಪ್ರಭಾತನಗರದ ಸುಲೋಚನ ನಾಗಪ್ಪ ಮೇಸ್ತ, ಚರ್ಚ ರಸ್ತೆಯ ಸವಿತಾ ವೆಂಕಟೇಶ ಮೇಸ್ತ, ಫಾರೆಸ್ಟ ಕಾಲೋನಿಯ ವನಿತಾ ಗಜಾನನ ನಾಯ್ಕ, ರಮಿಜಾ ಅಬ್ದುಲ್ ಖಾದರ ಶೇಖ ಅವರಿಗೆ ಪಪಂ ಅಧ್ಯಕ್ಷ ಶಿವರಾಜ ಮೇಸ್ತ ಅವರು ವಿವರಿಸಿದರು.
ಪ್ರಸಕ್ತ ಸಾಲಿನ ಆಯ-ವ್ಯಯದಲ್ಲಿ ಪಂಚಾಯತ ನಿಧಿಯ ಶೇ 5% ರಷ್ಟು ಬಡ ವಿಕಲಚೇತನರಿಗಾಗಿ 18500 ರೂ ಕಾದಿರಿಸಿದ್ದು, ಸದರಿ ಅನುದಾನದಲ್ಲಿ ಇಬ್ಬರು ಫಲಾನುಭವಿಗಳಿಗೆ ವೀಲ್ ಚೇರ್ ಉದ್ಯಮನಗರ ಮಂಜುನಾಥ ಪರಮೇಶ್ವರ ಮೇಸ್ತ, ರಾಘವೇಂದ್ರ ದೇವಿದಾಸ ಮೇಸ್ತ ಅವರಿಗೆ ವಿತರಿಸಲಾಯಿತು.
ಅಂಬೇಡ್ಕರ ಸೇವಾ ಸಂಘ ರಾಯಲಕೇರಿ ಇವರಿಗರ 121965 ರೂ. ಅನುದಾನದಲ್ಲಿ ಗೃಹಪಯೋಗಿ ನೀಡಲಾಯಿತು ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಪ್ರವೀಣಕುಮಾರ, ಉಪಾಧ್ಯಕ್ಷರ ಮೇದಾ ನಾಯ್ಕ, ಸದಸ್ಯರು, ಅಧಿಕಾರಿಗಳು ಹಾಜರಿದ್ದರು.
Leave a Comment