ಯಲ್ಲಾಪುರ: ನೆರೆ ಪರಿಹಾರಕ್ಕೆ ರಾಜ್ಯಸರಕಾರದಲ್ಲಿ ಹಣಕ್ಕೆ ಕೊರತೆಯಿಲ್ಲ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದೇನೆ .ಭೂಗರ್ಭ ತಜ್ಞರನ್ನು ಒಳಗೊಂಡ ತಂಡ ನೇಮಿಸಲಾಗುವದು.
ಹಾನಿಯ ನಿಖರ ಮಾಹಿತಿ ಪಡೆದ ಬಳಿಕ ಕೇಂದ್ರಕ್ಕೆ ಹೆಚ್ಚಿನ ನೆರವು ಕೇಳುವ ಕುರಿತು ಚರ್ಚಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಅತಿವೃಷ್ಟಿಗೀಡಾದ ತಾಲೂಕಿನ , ಅರಭೈಲ್ ಘಟ್ಟ ಬಳಿ ಭೂಕುಸಿತ ,ರಸ್ತೆ ಬಿರುಕು ಬಿಟ್ಟ ಪ್ರದೇಶ , ಕೊಚ್ಚಿ ಹೋದ ಗುಳ್ಳಪುರ ಸೇತುವೆ ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಶಾಸಕ ಶಿವರಾಮ ಹೆಬ್ಬಾರ ಮುಖ್ಯ ಮಂತ್ರಿಗಳಿಗೆಹಾನಿಗೊಳಗಾದ ಪ್ರದೇಶಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಯಲ್ಲಾಪುರ ಪ್ರವಾಸಿಮಂದಿರದಲ್ಲಿ ಮುಖ್ಯಮಂತ್ರಿಗಳಿಗೆ ಪುಷ್ಪವೃಷ್ಟಿ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ ಸದಸ್ಯ ಶಾಂತರಾಮ ಸಿದ್ದಿ, ವಾಕರರಾ ಸಂಸ್ಥೆಯ ಅಧ್ಯಕ್ಷ ವಿ.ಎಸ್ ಪಾಟೀಲ, ಭಟ್ಕಳ ಶಾಸಕ ಸುನೀಲ ನಾಯ್ಕ, ವಿ.ಪಂ ರಾ ಉಪಾಧ್ಯಕ್ಷ ಪ್ರಮೋದ ಹೆಗಡೆ, ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್ ಹೆದ್ದಾರಿ ಪ್ರಾಧಿಕಾರ ಇಲಾಖೆ ಯ ಅಭಿಯಂತ ರಾಜೇಂದ್ರ, ಎ ಇ ಇ ಪ್ರಶಾಂತ ಮುಂತಾದವರು ಇದ್ದರು.
Leave a Comment