ಭಟ್ಕಳ: ಮುರುಡೇಶ್ವ ಬಸ್ತಿ ಸಮೀಪ ವ್ಯಕ್ತಿಯೊರ್ವ್ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವೇಳೆ ಬೈಕ ನಲ್ಲಿ ಬಂದ 3 ಜನ ಯುವರು ಟೈಮ್ ಕೇಳುವ ನೆಪದಲ್ಲಿ ಹಲ್ಲೆ ಮಾಡಿ ಮೊಬೈಲ್ ಕದ್ದು ಪರಾರಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಹಲ್ಲೆಗೊಳಗಾಗಿ ಮೊಬೈಲ್ ಕಳೆದುಕೊಂಡ ವ್ಯಕ್ತಿಯನ್ನುಕಾಯ್ಕಿಣಿ ಮಠದ ಹಿತ್ಲು ನಿವಾಸಿ ದೇವೇಂದ್ರ ಜಟ್ಟಾ ನಾಯ್ಕ ಎಂದು ತಿಳಿದು ಬಂದಿದೆ. ಈತ ಶುಕ್ರವಾರ ರಾತ್ರಿ ಬಸ್ತಿ ಸಮೀಪ ತನ್ನ ಹೆಂಡತಿ ಬಳಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವೇಳೆ ಮೂವರು ಯುವಕರು ಬೈಕ್ ನಲ್ಲಿ ಬಂದು ಹಿಂದಿ ಭಾಷೆಯಲ್ಲಿ ಟೈಮ್ ಕೇಳುವ ನೆಪದಲ್ಲಿ ಆತನ ಮೇಲೆ ಹಲ್ಲೆ ಮಾಡಿ 9500 ರೂಪಾಯಿ ಮೌಲ್ಯದ ರೆಡ್ ಮೀ ಕಂಪನಿಗೆ ಸೇರಿದ ಮೊಬೈಲ್ ಕದ್ದು ಪರಾರಿಯಾಗ್ಗಿದ್ದು ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment