ಯಲ್ಲಾಪುರ :ಉತ್ತರ ಕನ್ನಡ ಜಿಲ್ಲೆಗೆ ನೆರೆ ಹಾನಿ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ಆಗಮಿಸಿದ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ರವಿವಾರ ರಾತ್ರಿ ಯಲ್ಲಾಪುರದ ಸಂಭ್ರಮ ಹೋಟೆಲ್ ಬಳಿ ಕಾಂಗ್ರೆಸ್ ಕಾರ್ಯ ಕರ್ತರು, ಅಭಿಮಾನಿಗಳು ಸ್ವಾಗತಿಸಿದರು.
ಅವರೊಂದಿಗೆ ಮಾಜಿ ಸಚಿವ ಆರ್. ವಿ ದೇಶಪಾಂಡೆ,ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಇದ್ದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ. ಎನ್. ಗಾಂವಕರ್,ಪ್ರಮುಖರಾದ ರವಿ ನಾಯ್ಕ, ಪ್ರಶಾಂತ್ ಸಭಾಹಿತ್, ಅನಿಲ ಮರಾಠಿ,ಪಟ್ಟಣ ಪಂಚಾಯತ್ ಸದಸ್ಯ ಕೈಸರ್ ಅಲಿ,ಪೂಜಾ ನೆತ್ರೆಕರ್, ಮುಶರತ್, ಸರಸ್ವತಿ ಗುನಗಾ ಮುಂತಾದವರು ಇದ್ದರು.
Yellapura news:ಸುದ್ದಿ ಹಾಗೂ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ
Leave a Comment