ಕಳೆದ 23 ವರ್ಷಗಳಿಂದ ತಮ್ಮ ಪ್ರಾಮಾಣಿಕ ಸೇವೆಯಿಂದ ಪಾಲಕರ ಹಾಗೂ ನಾಗರೀಕರ ಪ್ರೀತಿ ಪಾತ್ರರಾದ ಹೊನ್ನಾವರ ತಾಲ್ಲೂಕಿನ ಅನಂತವಾಡಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಫಾಧ್ಯಾಯರಾದ ಟಿ ಎನ್ ನಾಯ್ಕರವರ ನಿವೃತ್ತಿ ಬಿಳ್ಕೋಡುಗೆ ಸಮಾರಂಭ ಅತ್ಯಂತ ಹೃದಯ ಸ್ಪರ್ಶಿಯಾಗಿ ನಡೆಯಿತು.
ಶಾಲಾ ಅಭಿವೃದ್ಧಿ ಸಮಿತಿ,ಹಳೆಯ ವಿದ್ಯಾರ್ಥಿಗಳ ಸಂಘ, ಸ್ಪೂರ್ತಿ ಯುವಕ ಸಂಘ,ಪಾಲಕರು ಹಾಗೂ ಊರಿನ ನಾಗರೀರಕರ ಸಂಯುಕ್ತ ಆಶ್ರಯದಲ್ಲಿ ನಡೆದ ಗುರು ಗೌರವಾರ್ಪಣೆ ಮತ್ತು ಬೀಳ್ಕೋಡುಗೆ ಕಾರ್ಯಕ್ರಮವನ್ನು ಉದ್ಘಾಡಿಸಿ ಮಾತನಾಡಿದ ಹೊನ್ನಾವರ ಕ್ಷೇತ್ರ ಶಿಕ್ಷಣಾಧಿಕಾರಿ ಡಾ, ಸವಿತಾ ನಾಯಕರವರು, ನನ್ನ ಸೇವಾವಧಿಯಲ್ಲಿ ಶಿಕ್ಷರೊಬ್ಬರ ಬಿಳ್ಕೋಡುಗೆ ಸಮಾರಂಭ ಅತ್ಯಂತ ಹೃದಯ ಸ್ಪರ್ಶಿ ಹಾಗೂ ವಿಶೇಷವಾಗಿ ನಡೆದ ಕಾರ್ಯಕ್ರಮವಾಗಿದೆ. ಮುಖ್ಯೋಧ್ಯಾಪಕ ಟಿ ಎನ್ ನಾಯ್ಕರವರು ತಮ್ಮಾ ಸೇವಾ ಅವಧಿಯಲ್ಲಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ದೀಗಾಗಿ ದುಡಿದಿರುವುದು ಈ ಸನ್ಮಾನ ಸಮಾರಂಭವೇ ಕಾರಣವಾಗಿದೆ .ಅವರ ನಿವೃತ್ತ ಜೀವನ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಸೈನಿಕ ವಾಮನ ನಾಯ್ಕರವರು ನಿವೃತ್ತಿ ಹೊಂದುತ್ತಿರುವ ಶಿಕ್ಷಕ ಟಿ ಎನ್ ನಾಯ್ಕರವರ ಅಭಿಮಾನದಿಂದ ಈ ಭಾಗದ ನಾಗರೀಕರು ಹಾಗೂ ಹಳೆ ವಿದ್ಯಾರ್ಥಿಗಳು ಗುರುಗಳಿಗೆ ವಂದಿಸುವ ಗುರು ಗೌರವಾರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಕೇವಲ ಕೇಲವೇ ದಿನಗಳಲ್ಲಿ ಇಂತಹ ವಿಶೇಷ ಕಾರ್ಯಕ್ರಮ ಸಂಘಟಿಸಿರುವುದು ಆಭಿನಂದನೀಯ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಮಂಕಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಅಜೇಯ ಭಂಡಾಕರರವರು ಮಂಕಿ ಗ್ರಾಮದ ಜನತೆ ನಿಜಕ್ಕೂ ಉತ್ತಮ ಮಾದರಿ ಕೆಲಸಗಳನ್ನು ಮಾಡುತ್ತರುವುದು ಅಭಿಮಾನದ ಸಂಗತಿ. ಈ ಬಿಲ್ಕೋಡುಗೆ ಕಾರ್ಯಕ್ರಮವನ್ನು ಉತ್ತಮವಾಗಿ ಸಂಘಟಿಸಿದ್ದಾರೆ ಎಂದರು.
ಸನ್ಮಾನ ಸ್ವಿಕರಿಸಿ ಸನ್ಮಾನಿತ ಶಿಕ್ಷಕ ಟಿ ಎನ್ ಎನ್ ನಾಯ್ಕರವರು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.
ವೇದಿಕೆಯಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷ ಎಂ ಜಿ ನಾಯ್ಕ, ಉಪಾದ್ಯಕ್ಷ ಸುರೇಶ ನಾಯ್ಕ, ಅನಂತವಾಡಿ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ನವೀನ ನಾಯ ಅರಣ್ಯಾಧಿಕಾರಿ ಮಾದೇವ ಮಡ್ಡಿ ,ಹಿರಿಯ ಎಸ್ ಡಿ ಎಮ್ ಸಿ ಸದಸ್ಯ ಗೋಪಾಲ ಬಿ ನಾಯ್ಕ, ಸಿ ಆರ್ ಪಿ ವಿಡಿ ನಾಯ್ಕ ಶಿಕ್ಷಕಿ ಸಾಧನಾ ಬರ್ಗಿ ಎಸ್ ಡಿ ಎಮ್ ಸಿ ಅಧ್ಯಕ್ಷ ಮಹೇಶ ನಾಯ್ಕ ಮಾಜಿ ಅಧ್ಯಕ್ಷ ಅಣಪ್ಪ ನಾಯ್ಕ, ಸ್ಪೂರ್ತಿ ಯುವಕ ಸಂಘದ ಅಧ್ಯಕ್ಷ ನಾಗರಾಜ ಗಣೇಶ ನಾಯ್ಕ, ಅಣಪ್ಪ ನಾಯ್ಕ ತಾಳಮಕ್ಕಿ , ಶಿಕ್ಷಕ ಗಜಾನನ ನಾಯ್ಕ, ಎನ್ ಕೆ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಊರನಗರೀಕ ಪರವಾಗಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ವಿಶೇಷವಾಗಿ ಬಂಗಾರದ ಉಂಗುರ ತೊಡಿಸಿ ಹೃದಯ ಸ್ಪರ್ಶಿಯಾಗಿ ಸನ್ಮಾನಿಸಲಾಯಿತು. ಶಿಕ್ಷಕ ಉದಯ ನಾಯ್ಕ ಹಾಗೂ ಸುಧೀಶ ನಾಯ್ಕ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕ ಗಜಾನನ ನಾಯ್ಕ ಸ್ವಾಗತಿಸಿದರು. ಮಹೇಶ ನಾಯ್ಕ ವಂದಿಸಿದರು.
ವಿವಿಧ ಸಂWಗಳ ಪದಾಧಿಕಾರಿಗಳು, ಪಾಲಕರು ಹಾಗೂ ವಿದ್ಯಾರ್ಥಿ ವೃಂದದಿಂದ ಶಿಕ್ಷಕ ಟಿ ಎನ್ ನಾಯ್ಕರವರಿಗೆ ಸನ್ಮಾನಿಸಲಾಯಿತು. ಹಳೇ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರುಗಳಿಗೆ ವಂದನೆ ಸಲ್ಲಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು
Leave a Comment