ಭಟ್ಕಳ: ಮಾನಸಿಕ ಅಸ್ವಸ್ಥನೊರ್ವ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿ, ಅವನನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟ ಪ್ರಕರಣ ಭಟ್ಕಳ ಪಟ್ಟಣದ ಮುಟ್ಟಳ್ಳಿ ಬಳಿಯಲ್ಲಿ ಮಂಗಳವಾರ ನಡೆದಿದೆ.
ಮಹಾರಾಷ್ಟç ಮೂಲದ ಮಾದೇವ ಸೀತಾರಾಮ ರಾಥೋಡ್ ಮಾನಸಿಕ ಅಸ್ವಸ್ಥ. ಮಂಗಳವಾರ ಕೃಷಿ ಭೂಮಿಯಲ್ಲಿ ಬಿತ್ತನೆ ಮಾಡುತ್ತಿದ್ದ ಮಹಿಳೆಯರ ಏಕಾಏಕಿ ಹಲ್ಲೆಗೆ ಮುಂದಾಗಿದ್ದಾನೆ. ಅವನನ್ನು ತಪ್ಪಿಸಲು ಬಂದವರ ಮೇಲೆ ಹಲ್ಲೆಗೆ ಇಳಿದಿದ್ದಾನೆ. ಇತಿನಿಂದ ಹಲ್ಲೆಗೊಳಗಾದ ಭಾಸ್ಕರ ನಾಯ್ಕ ಕುಂದಾಪುರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಾನಸಿಕ ಅಸ್ವಸ್ಥನ ವರ್ತನೆ ಮೀತಿ ಮೀರುತ್ತಿರುವಂತೆ ೧೧೨ಕ್ಕೆ ಕರೆ ಮಾಡಿ ವಿಷಯ ತಿಳಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಬಂದರೂ ಆತನನ್ನು ನಿಯಂತ್ರಿಸಲು ಹರಸಾಹಸ ಪಟ್ಟು ಸಾರ್ವಜನಿಕರ ಸಹಾಯದಿಂದ ಕೊನೆಗೆ ಆತನನ್ನು ಭಟ್ಕಳ ಠಾಣೆಗೆ ಕರೆತರಲಾಗಿದೆ. ಮಾನಸಿಕ ಅಸ್ವಸ್ಥ ಮುಂಬೈನಿದ ರೈಲಿನಲ್ಲಿ ಬಂದಿರಬಹುದು ಎಂದು ಶಂಕಿಸಲಾಗಿದೆ.
Leave a Comment