ಬೆಂಗಳೂರು : ಬಡವರಿಗೆ ಲಭ್ಯವಾಗಬೇಕಾದ ಪಟಿತರವನ್ನು ಅನರ್ಹರು ಪಡೆದುಕೊಳ್ಳುತ್ತಿರುವುದನ್ನು ಪತ್ತೆ ಹೆಚ್ಚುತ್ತಿರುವ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಜಿಲೈಅಂತ್ಯದವರೆಗೆ 1.58 ಲಕ್ಷ ಕಾರ್ಡ್ ಳನ್ನು ರದ್ದು ಮಾಡಲಾಗಿದೆ.
ಈ ವರ್ಷ ಈವರೆಗೆ ಸುಮಾರು 4,07,443 ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ ದಾರರು ನಿಯಮ ಉಲ್ಲಂಘಿಸಿ ಸರ್ಕಾರದ ಸಬ್ಸಿಡಿ ಬಳಸುತ್ತಿರುವ ಕಂಡು ಬಂದಿದ್ದು, ಈಗಾಗಲೇ 1,58,174 ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ. ಜನವರಿ 1 ರಿಂದ ಜುಲೈ 20ರವರೆಗಿನ ಅಂಕಿ ಅಂಶಗಳ ಪ್ರಕಾರ 2,127 ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದು, ಇದರಲ್ಲಿ 1016 ಕಾರ್ಡ್ ಗಳನ್ನು ಎಪಿಎಲ್ ಗೆ ಪರಿವರ್ತಿಸಲಾಗಿದೆ. ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ದಾರರ ಆದಾಯದ ಬಗ್ಗೆ ಮಾಹಿತಿ ಪಡೆಯಲು ಆಹಾರ ಇಲಾಖೆಯ ಐಟಿ ಮತ್ತು ಕಂದಾಯ ಇಲಾಖೆಯ ನೆರವು ಪಡೆಯುತ್ತಿದೆ.
ಆದಾಯ ತೆರಿಗೆ ಇಲಾಖೆ ನೀಡಿದ ಮಾಹಿತಿ ಆಧಾರದಲ್ಲಿ 15,223 ಪಡಿತರ ಚೀಟಿ 1.20 ಲಕ್ಷ ರೂ.ಗಿಂತ ಹೆಚ್ಚಿನ ಕೌಟುಂಬಿಕ ಆದಾಯ ಹೊಂದಿದೆ 15.502 ಕಾರ್ಡ್ ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟರ್ಗಿಂತ ಭೂಮಿ ಹೊಂದಿದೆ 3,499 ಮಂದಿಯಕಾರ್ಡ್ ಎಪಿಎಲ್ಗೆ ಬದಲಾವಣೆಯಾಗಿದೆ.
ಸಾವಿನ ಮಾಹಿತಿ ನೋಂದಣಿ ಆಧಾರದಮೇಲೆ 47,967 ಪಡಿತರ ಚೀಟಿ ರದ್ದುಪಡಿಸಲಾಗಿದೆ. ಎಂದು ಆಹಾರ ಇಲಾಖೆ ನೀಡಿರುವ ಮಾಹಿತಿ ಲಭ್ಯವಾಗಿದೆ.
Leave a Comment