ಯಲ್ಲಾಪುರ: ಎಪ್ರೀಲ್ ತಿಂಗಳಿನಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಪೀಡ್ ಸ್ಕೇಟಿಂಗ್ ಹಾಗೂ ಚಂಡಿಗಡದಲ್ಲಿ ನಡೆದ ರಾಷ್ಟ್ರ ಮಟ್ಟದ ರೋಲರ್ ಹಾಕಿ ಸ್ಕೇಟಿಂಗ್ ನಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿದ ಕ್ರೀಡಾಪಟುಗಳಿಗೆ ಭಾನುವಾರ 11 ಗಂಟೆಗೆ ಯಲ್ಲಾಪುರದ ರೈತ ಸಭಾಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮ ದಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಪ್ರಮಾಣ ಪತ್ರ ವಿತರಿಸಲಿದ್ದಾರೆ.
ಬೆಳಿಗ್ಗೆ,ಕಾರವಾರ. ಕೈಗಾ , ಶಿರಸಿ ಯಲ್ಲಾಪುರ ಹಾಗೂ ಮುಂಡಗೊಡ ತಂಡಗಳ ನಡುವೆ ಉತ್ತರ ಕನ್ನಡ ಪ್ರೀಮಿಯರ್ ಲೀಗ್ ರೊಲರ್ ಸ್ಕೆಟಿಂಗ್ ಹಾಕಿ ಪಂದ್ಯಾವಳಿ ನಡೆಯಲಿದ್ದು ಗೆದ್ದ ತಂಡಕ್ಕೆ ನಗದು ಹಾಗು ಪಾರಿತೊಷಕ ನಿಡಲಾಗುತ್ತದೆ.
ತಹಶಿಲ್ದಾರ ಶ್ರೀಕೃಷ್ಣ ಕಾಮಕರ್, ಸಿ ಪಿ ಆಯ್ ಸುರೇಶ ಯಳ್ಳುರ್ , ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್ ಹಾಗು ಉದ್ಯಮಿಬಾಲಕೃಷ್ಣ ನಾಯಕ , ಸಮಾಜಿಕ ಮುಖಂಡ ವಿಜಯ ಮಿರಾಶಿ ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ತಂಡದ ತರಬೇತುಧಾರ ದೀಲಿಪ್ ಹಣಬರ್ ತಿಳಿಸಿದ್ದಾರೆ.
Leave a Comment