• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸ್ಥಳಿಯ ವಿರೋಧದ ನಡುವೆ ನಿರ್ಮಾಣವಾದ ಕಸವಿಲೇವಾರಿ ಘಟಕಕ್ಕೆ ನ್ಯಾಯಲಯದ ತೀರ್ಪು ಬರುವ ಮೊದಲು ಉದ್ಘಾಟನೆಗೆ ತರಾತುರಿ.

August 7, 2021 by Vishwanath Shetty Leave a Comment

ಹೊನ್ನಾವರ: ತಾಲೂಕಿನ ಹೊಸಾಕುಳಿ ಗ್ರಾಮ ಪಂಚಾಯತಿಯಲ್ಲಿ ನಿರ್ಮಾಣವಾದ ಕಸವಿಲೇವಾರಿ ಘಟಕದ ವಿಷಯ ಮತ್ತೊಮ್ಮೆ ಸುದ್ದಿಯಲ್ಲಿದ್ದು ಉದ್ಘಾಟನೆಯನ್ನು ಹೈಕೊರ್ಟ ತೀರ್ಪು ಬಳಿಕವೇ ಮಾಡುವಂತೆ ಸ್ಥಳಿಯರು ಒತ್ತಾಯಿಸಿದ್ದಾರೆ.
ಆಡಳಿತಧಿಕಾರಿಗಳ ನೇಮಕವಾದ ಅವಧಿಯಲ್ಲಿ ಹಲವು ವಿವಾದಗಳ ನಡುವೆಯ ಚಾಲನೆ ದೊರೆತ ಕಟ್ಟಡ ನಿರ್ಮಾಣ ಕಾಮಗಾರಿ ಇದೀಗ ಮುಗಿದಿದ್ದು, ಹೈರ್ಕೊಟನಲ್ಲಿ ಪ್ರಕರಣ ತಿರ್ಮಾನವಾಗುವರೆಗೂ ಉದ್ಘಾಟನೆ ಮಾಡಲೇಬಾರದು.

ಕಾನೂನನ್ನು ಉಲ್ಲಂಘಿಸಿ ಉದ್ಘಾಟನೆ ಮಾಡಲು ಮುಂದಾದರೆ ಸಾರ್ವಜನಿಕರು ಹೋರಾಟದ ಮಾರ್ಗ ಅನುಸರಿಸುವ ಎಚ್ಚರಿಕೆ ನೀಡಿದ್ದಾರೆ.ಪ್ರಾರಂಭದಲ್ಲಿ ೨೦೧೯ರ ಗ್ರಾಮಸಭೆಯಲ್ಲಿ ಗ್ರಾಮದ ಮುಡಾರೆ ಬಳಿ ಸರ್ವೆನಂಬರ್ ೨೨೫ ಬೆಟ್ಟ ೯ ರ ೧೦ ಗುಂಟೆ ಜನವಸತಿ ರಹಿತ ಪಂಚಾಯತಿ ಸ್ಥಳದಲ್ಲಿ ಕಟ್ಟಡ ನಿರ್ಮಾಣಕ್ಕೆ ಸ್ಥಳ ನಿಗಧಿಯಾಗಿತ್ತು.

ಆ ಸ್ಥಳದಲ್ಲಿ ಸಾರ್ವಜನಿಕರ ವಿರೋಧದ ಬಳಿಕ ಪಂಚಾಯತಿಯಲ್ಲಿ ಆಡಳಿತ ಆಧಿಕಾರ ಅವಧಿಯಲ್ಲಿ ವಿಶೇಷ ಮುತುವರ್ಜಿ ವಹಿಸಿ ಸಾರ್ವಜನಿಕರ ಅಭಿಪ್ರಾಯ ಪಡೆಯದೇ ವರ್ಕ ಆರ್ಡರ್ ದೊರೆಯುವ ಮುನ್ನವೇ ಜನವಸತಿ ಪ್ರದೇಶದ ಕಾಮಗಾರಿ ಆರಂಭಿಸಲಾಗಿತ್ತು. ಸ್ಥಳಿಯರ ವಿರೋಧಕ್ಕೂ ಕ್ಯಾರೆ ಅನ್ನದೇ ಕಾಮಗಾರಿ ನಡೆದಿತ್ತು ನ್ಯಾಯಾಲದ ಮೊರೆ ಹೋಗಿದ್ದು ಇದು ವಿಚಾರಣೆಯ ಹಂತದಲ್ಲಿದೆ. ನಿಯಮದ ಪ್ರಕಾರ ೩೦೦ ಮೀಟರ್ ಅಂತರದಲ್ಲಿ ಮನೆ ಜನವಸತಿ ರಹಿತ ಪ್ರದೇಶವಿರಬೇಕು. ಆದರೆ ಈ ಪ್ರದೇಶದ ೫೦ ಮೀಟರ್ ಅಂತರದಲ್ಲಿ ಸರ್ಕಾರದವರೆ ನೀಡಿದ ೧೦ಕ್ಕೂ ಅಧಿಕ ಆಶ್ರಯ ಯೋಜನೆಯ ಮನೆಗಳಿವೆ. ೧೧೦ ಮೀಟರ್ ಅಂತರದಲ್ಲಿ ರಾಜ್ಯ ಹೆದ್ದಾರಿ ರಸ್ತೆ ಇದೆ.

IMG20210806113433

೧೫೦ ಮೀಟರ್ ಅಂತರದಲ್ಲಿ ೪೦ಕ್ಕೂ ಅಧಿಕ ಜನತಾಕಾಲೋನಿ ಮನೆಗಳಿವೆ. ಅಲ್ಲದೇ ಕುಡಿಯುವ ನೀರಿನ ಬಾವಿ ಹಾಗೂ ಬೊರವೆಲ್ ಮೂಲಕ ಕುಡಿಯುವ ನೀರು ಸುತ್ತಮುತ್ತಲ ಭಾಗಗಳಿಗೆ ಸರಬರಾಜು ಆಗಲಿದೆ. ಈ ಎಲ್ಲಾ ನಿಯಮಗಳನ್ನು ಮೀರಿ ಘಟಕ ನಿರ್ಮಿಸಲಾಗಿದೆ ಎಂದು ಸ್ಥಳಿಯರು ಹೈಕೊರ್ಟ ಮೋರೆ ಹೋಗಿದ್ದಾರೆ. ವಿಚಾರಣೆಯ ಹಂತದಲ್ಲಿರುವಾಗಲೇ ಏಕಾಏಕಿ ಘಟಕಕ್ಕೆ ಚಾಲನೆ ನೀಡಲು ಗ್ರಾಮ ಪಂಚಾಯತಿ ಅಧಿಕಾರಿಗಳು ಅಣಿಯಾಗುತ್ತಿದ್ದಾರೆ ಎಂದು ಸ್ಥಳಿಯರು ಗಂಭೀರ ಆರೋಪ ಮಾಡಿದ್ದಾರೆ. ಈಗಾಗಲೇ ಸಂಭದಿಸಿದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಪ್ರಸುತ್ತ ಆಯ್ಕೆ ಆದ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತಂದಿದ್ದು ಹಲವು ಸದಸ್ಯರು ಸಹಮತ ಸೂಚಿಸಿದ್ದಾರೆ.

ಹೈಕೊರ್ಟನಿಂದ ನಿರ್ಣಯವಾಗುವರೆಗೂ ಯಾವುದೇ ಕಾರಣಕ್ಕೂ ಘಟಕ ಚಾಲನೆ ನೀಡಬಾರದು ಎಂದು ಒತ್ತಾಯಿಸಿದ್ದಾರೆ.
ಸ್ಥಳಇಯ ನಿವಾಸಿ ಪ್ರಶಾಂತ ಶೇಟ್ ಮಾತನಾಡಿ ಅಧಿಕಾರಿಗಳು ಆಡಳಿತ ಅಧಿಕಾರಿಗಳ ಅವಧಿಯಲ್ಲಿ ಏಕಾಏಕಿ ಘಟಕ ನಿರ್ಮಿಸಿದ್ದಾರೆ. ಸ್ಥಳಿಯರ ವಿರೋಧ ಹಾಗೂ ಸುತ್ತಲಿನ ಪರಿಸರದ ಬಗ್ಗೆ ಕಾಳಜಿ ಇಲ್ಲ. ಗ್ರಾಮಸಭೆಯ ಠರಾವು ತಿದ್ದುಪಡಿ ಆದ ಬಗ್ಗೆ ಗೋಚರವಾಗುತ್ತಿದ್ದು ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.

ಸುತ್ತಮುತ್ತಲಿನ ಪಂಚಾಯತಿಯವರ ತ್ಯಾಜ್ಯವು ಈ ಭಾಗಕ್ಕೆ ತರುವ ಸಾಧ್ಯತೆ ಇದೆ. ಜನವಸತಿ ಪ್ರದೇಶದ ಈ ಘಟಕ ಉದ್ಘಾಟನೆಗೆ ಮೊದಲು ಹೈಕೊರ್ಟ ತಿರ್ಮಾನವಾಗಲಿ ಎಂದರು.
ಇನ್ನೊರ್ವ ನಿವಾಸಿ ನಂದನ ನಾಯ್ಕ ಮಾತನಾಡಿ ಘಟಕದ ಪಕ್ಕವೇ ನಮ್ಮ ಜಾಗವಿದೆ. ತ್ಯಾಜ್ಯದಿಂದ ಪಕ್ಕದೇ ವಾಸ ಮಾಡಿದರೆ ನಮ್ಮ ಆರೊಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ನಾವು ಅಲ್ಲಿ ವಾಸಿಸಲು ಮುಂದೆ ಸಾಧ್ಯವಿಲ್ಲ ಆ ಪ್ರದೇಶಕ್ಕೆ ಹಣ ನೀಡಿ ಪಂಚಾಯತಿಯವರೆ ತೆಗೆದುಕೊಳ್ಳಲಿ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಮಾಜಿ ಸದಸ್ಯ ಶ್ರೀಧರ ಭಟ್, ಸ್ಥಳಿಯರಾದ ನಾರಾಯಣ ಹೆಗಡೆ, ಈಶ್ವರ ನಾಯ್ಕ, ಮಣಿಕಂಠ ಶೆಟ್ಟಿ, ಮಹೇಶ ಹೆಗಡೆ, ಶಿವ ಹೆಗಡೆ ಮತ್ತಿತರರು ಹಾಜರಿದ್ದರು.

ಹೊನ್ನಾವರ ಹಾಗೂ ಸುದ್ದಿಗಾಗಿ ಈ ಗ್ರುಪ್ ಸೇರಿ ;ನಿಮ್ಮ ಸ್ನೇಹಿತರಿಗೂ ಫಾರ್ವರ್ಡ್ ಮಾಡಿ ಗುಂಪಿಗೆ ಸೇರಿಸಿ.ಗ್ರುಪ್ ಸೇರಲು ಈ ಲಿಂಕ್ ಒತ್ತಿhttps://chat.whatsapp.com/G9SxG7l3Wo36m72c85bSOA

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: ಜನವಸತಿ ಪ್ರದೇಶದ ಈ ಘಟಕ ಉದ್ಘಾಟನೆ, ಭಾಗಕ್ಕೆ ತರುವ ಸಾಧ್ಯತೆ, ಸುತ್ತಮುತ್ತಲಿನ ಪಂಚಾಯತಿಯವರ ತ್ಯಾಜ್ಯ, ಸ್ಥಳಿಯರ ವಿರೋಧಕ್ಕೂ ಕ್ಯಾರೆ ಅನ್ನದೇ ಕಾಮಗಾರಿ, ಹೋರಾಟದ ಮಾರ್ಗ ಅನುಸರಿಸುವ ಎಚ್ಚರಿಕೆ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...