
ಯಲ್ಲಾಪುರ:ಮಕ್ಕಳ ಭವಿüಷ್ಯಕ್ಕಾಗಿ ಶಿಕ್ಷಣದೊಂದಿಗೆ ಕ್ರೀಡೆಯೂ ಆರೋಗ್ಯಯುತ ಸಮಾಜ ನಿರ್ಮಿಸುವಲ್ಲಿ ಸಹಕಾರಿಯಾಗಿದೆ. ಪಾಲಕರು ಮಕ್ಕಳಿಗೆ ಸ್ಕೆಟಿಂಗ್ ತರಭೇತಿ ಕೊಡಿಸಿದ್ದರಿಂದ ಅವರಲ್ಲಿ ಶೈಕ್ಷಣಿಕವಾಗಿ ಕ್ರೀಡಾಮನೋಭಾವನೆ ಬೆಳೆಯಲು ಸಾಧ್ಯವಾಗುತ್ತದೆ.ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಅವರು ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಪೀಡ್ ಸ್ಕೇಟಿಂಗ್ ಹಾಗೂ ಚಂಡಿಗಡದಲ್ಲಿ ನಡೆದ ರಾಷ್ಟ್ರ ಮಟ್ಟದ ರೋಲರ್ ಹಾಕಿ ಸ್ಕೇಟಿಂಗ್ನಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿದ ಕ್ರೀಡಾಪಟುಗಳಿಗೆ ಪ್ರಮಾಣಪತ್ರವನ್ನು ವಿತರಿಸಿ ಮಾತನಾಡಿದರು. ಎಲ್ಲರೂ ರಾಜ್ಯ, ರಾಷ್ಟç ಮಟ್ಟದಲ್ಲಿಯೇ ಗುರುತಿಸಿಕೊಳ್ಳಲು ಸಾಧ್ಯವಾಗದಿದ್ದರೂ ಕೂಡ ಕಲಿತಿರುವ ವಿದ್ಯೆ ಎಂದಿಗೂ ಕೈಬಿಡದೇ ಅವರಿಗೆ ಆಧಾರವಾಗಿರುತ್ತದೆ. ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ ಎಂದರು.
ಈ ಕಾರ್ಯಕ್ರಮಕ್ಕೂ ಮುನ್ನ ಕಾರವಾರ. ಕೈಗಾ , ಶಿರಸಿ ಯಲ್ಲಾಪುರ ಹಾಗೂ ಮುಂಡಗೊಡ ತಂಡಗಳ ನಡುವೆ ಉತ್ತರ ಕನ್ನಡ ಪ್ರೀಮಿಯರ್ ಲೀಗ್ ರೊಲರ್ ಸ್ಕೆಟಿಂಗ್ ಹಾಕಿ ಪಂದ್ಯಾವಳಿ ನಡೆಯಿತು. ಗೆದ್ದ ತಂಡಕ್ಕೆ ನಗದು ಹಾಗು ಪಾರಿತೊಷಕ ವಿತರಿಸಿದರು.
ಸಚಿವರ ಧರ್ಮಪತ್ನಿ ವನಜಾಕ್ಷಿ ಹೆಬ್ಬಾರ , ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್ ,ಸಿ ಪಿ ಆಯ್ ಸುರೇಶ ಯಳ್ಳುರ್ , ಉದ್ಯಮಿ ಬಾಲಕೃಷ್ಣ ನಾಯಕ , ಸಮಾಜಿಕ ಮುಖಂಡರಾದ ವಿಜಯ ಮಿರಾಶಿ , ಮುರಳಿ ಹೆಗಡೆ , ಪಟ್ಟಣ ಪಂಚಾಯತ ಸದಸ್ಯ ಸತೀಶ ನಾಯ್ಕ ಕ£,Áðಟಕ ತಂಡದ ತರಬೇತುಧಾರ ದೀಲಿಪ್ ಹಣಬರ್ , ಯಲ್ಲಾಪುರ ರೊಲರ್ ಸ್ಕೆಟಿಂಗ್ ಕ್ಲಬ್ ಅಧ್ಯಕ್ಷ ಪ್ರಕಾಶ ಶೆಟ್, ಶಿರಸಿ ಸ್ಕೆಟಿಂಗ್ ಕ್ಲಬ್ ಅಧ್ಯಕ್ಷ ಕಿರಣ ಮುಂತಾದವರು ಉಪಸ್ಥಿತರಿದ್ದರು. ಅನೂಪ್ ಪ್ರಾರ್ಥಿಸಿದರು. ಶಮಾ ಹಾಗೂ ಶರೀಫ ಹಾರ್ಸಿಕಟ್ಟಾ ನಿರ್ವಹಿಸಿದರು.
Leave a Comment