ಹೈದರಾಬಾದ್ : ಆಂಧಪ್ರದೇಶದ ಹೈಕೋರ್ಟ್ ಜಡ್ಜ್ಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟಗಳನ್ನು ಮಾಡಿದ ಪ್ರಕರಣದಲ್ಲಿ ಪೊಲೀಸರು ಭಾನುವಾರ ಇಬ್ಬರನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ. ಜಡ್ಜ್ಗಳ ಇತ್ತೀಚೆಗೆ ನೀಡಿರುವ ಕೆಲ ತೀರ್ಪಿನ ಕುರಿತು ಆಕ್ಷೇಪಾರ್ಹವಾಗಿ ಸಾಮಾಜಿಕ ಕಾಲತಾಣಗಳಲ್ಲಿ ಸಂದೇಶ ಹರಿಬಿಡಲಾಗಿತ್ತು.
ಈ ಪ್ರಕರಣದಲ್ಲಿ 16 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಇವರಲ್ಲಿ ಹೆಚ್ಚಿನವರು ಈಗ ತಲೆಮೆರಸಿಕೊಂಡಿದ್ದಾರೆ ಎನ್ನಲಾಗಿದೆ. ಅವರನ್ನು ಪತ್ತೆ ಮಾಡಿ, ಬಂಧಿಸುವ ಕಾರ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಡ್ಜ್ಗಳಿಗೆ ಬೆದರಿಕೆ ಬರುತ್ತಿದ್ದರೂ, ತನಿಖಾ ಸಂಸ್ಥೆಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ವಿ.ರಮಣ ಇತ್ತೀಚೆಗೆ ಅಸಮಾಧನ ವ್ಯಕ್ತಪಡಿಸಿದ ಬಳಿಕ, ಜಡ್ಜ್ಗಳ ಕುರಿತು ಪ್ರಕರಣದ ತನಿಖೆ ಚುರುಕುಗೊಂಡಿದೆ. ಜಾಖಂಡದ ಧನಬಾದ್ನ ಜಡ್ಜ್ ಉತ್ತಮ್ ಆನಂದ ಅವರ ಹತ್ಯೆ ಪ್ರಕರಣದ ಬಳಿಕ ನ್ಯಾಯಾಧೀಶರ ಭದತೆ ವಿಚಾರ ಹೆಚ್ಚು ಚರ್ಚೆಗೆ ಬಂದಿದೆ.
Leave a Comment